ಗೂನಡ್ಕ: ತೂಫಾನ್ ವಾಹನ ಮತ್ತು ಸ್ಕೂಟಿ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟಿ ಸವಾರರು ಗಂಭೀರ ಗಾಯಗೊಂಡ ಘಟನೆ ಕಲ್ಲುಗುಂಡಿ ಸಮೀಪ ಗೂನಡ್ಕ ಮಾಣಿ-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ.
ಗಾಯಗೊಂಡವರನ್ನು ದೊಡ್ಡಕ್ಕ ನಿವಾಸಿ ವಾರಿಸ್ ಹಾಗೂ ಅಶ್ವಿದ್ ಎಂದು ಗುರುತಿಸಲಾಗಿದೆ. ಯುವಕರು ದೊಡ್ಡಕ್ಕ ಬಳಿಯಿಂದ ಸುಳ್ಯದತ್ತ ತೆರಳುತ್ತಿದ್ದರು, ಈ ವೇಳೇ ಸುಳ್ಯದಿಂದ ಮಡಿಕೇರಿ ಕಡೆ ಹೋಗುತ್ತಿದ್ದ ತೂಫಾನ್ ವಾಹನಕ್ಕೆ ಡಿಕ್ಕಿಯಾಗಿದೆ ಎನ್ನಲಾಗಿದೆ.
ಸ್ಥಳೀಯರು ಯುವಕರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ತೂಫಾನ್-ಸ್ಕೂಟಿ ಪರಸ್ಪರ ಡಿಕ್ಕಿ:ಸ್ಕೂಟಿ ಸವಾರರು ಗಂಭೀರ
Subscribe
Login
0 Comments