ಉಡುಪಿ: ಶ್ರೀಕೃಷ್ಣ ದೇವರ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ಸಾಗುತ್ತಿದ್ದ ಭಕ್ತರೊಬ್ಬರು ಅಸ್ವಸ್ಥಗೊಂಡು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ರವಿವಾರ ನಡೆದಿದೆ.
ಕುಸಿದು ಬಿದ್ದಿರುವ ಯಾತ್ರಾರ್ಥಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು, ಶ್ರೀಕೃಷ್ಣ ಮಠದ ರಕ್ಷಣಾ ಸಿಬ್ಬಂದಿಗಳ ಸಹಕಾರದಿಂದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರು. ಅದಾಗಲೇ ಯಾತ್ರಾರ್ಥಿ ಮೃತಪಟ್ಟಿರುವುದನ್ನು ವೈದ್ಯರು ಧೃಡಿಕರಿಸಿದರು. ಮೃತ ಯಾತ್ರಾರ್ಥಿಯನ್ನು ಬೆಂಗಳೂರಿನ ಮೋಹನ್ (೭೦) ಎಂದು ಗುರುತಿಸಲಾಗಿದೆ.