ವಿಟ್ಲ: ವ್ಯಕ್ತಿಯೋರ್ವ ಜನನಿಬಿಡ ಸ್ಥಳದಲ್ಲೇ ಮಹಿಳೆಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆಗೈದು ಕೊಲೆಗೆ ಯತ್ನಿಸಿದ ಘಟನೆ ಪುಣಚ ಗ್ರಾಮದ ಪರಿಯಾಲ್ತಡ್ಕ ಪೇಟೆಯಲ್ಲಿ ನಡೆದಿದೆ. ಈ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಾಟೆಕಲ್ಲು ನವಗ್ರಾಮದ ನಿವಾಸಿ ಸೆಂಟ್ರಿAಗ್ ಶೇಖರ ಯಾನೆ ಶೇಖರ ಪೂಜಾರಿ(೫೦) ಬಂಧಿತ ಆರೋಪಿ.
ಪುಣಚ ಗ್ರಾಮದ ನಾಟೆಕಲ್ಲು ನವಗ್ರಾಮ ನಿವಾಸಿ ಲತಾ ಎಂಬ ಮಹಿಳೆಯ ಮೇಲೆ ಶೇಖರ್ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಗಂಭೀರ ಗಾಯಗೊಂಡ ಮಹಿಳೆಯನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾರ್ವಜನಿಕರ ಎದುರಲ್ಲೇ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ:ಆರೋಪಿ ಪೊಲೀಸ್ ವಶಕ್ಕೆ
Subscribe
Login
0 Comments