Sunday, June 8, 2025

ಬಾಡಿಗೆಗೆಂದು ಕರೆದೊಯ್ದು ಕಾರು ಚಾಲಕನ ಸುಲಿಗೆ ಪ್ರಕರಣ; ನಾಲ್ವರ ಬಂಧನ

ಮಣಿಪಾಲ: ಬಾಡಿಗೆ ನೆಪದಲ್ಲಿ ಕರೆದೊಯ್ದು ಕಾರು ಚಾಲಕನನ್ನು ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮಂಗಳೂರು ಉಳ್ಳಾಲ ನಿವಾಸಿ ಚರಣ್‌ (35), ಶಿರ್ವ ನಿವಾಸ ಮೊಹಮ್ಮದ್‌ ಅಝರುದ್ದೀನ್‌ (39), ಬಂಟ್ವಾಳ ನಿವಾಸಿ ಶರತ್‌ ಪೂಜಾರಿ (36) ಮತ್ತು ಮಂಗಳೂರು ನಿವಾಸಿ ಜಯಪ್ರಸಾದ್‌ (43) ಎಂದು ಗುರುತಿಸಲಾಗಿದೆ.

ಆರೋಪಿಗಳು ಶ್ರೀಧರ್ ಎಂಬುವವರ ಕಾರನ್ನು ಮಣಿಪಾಲದಿಂದ ಕಾರವಾರಕ್ಕೆ ಬಾಡಿಗೆಗೆಂದು ಕರೆದೊಯ್ದು ಅಂಕೋಲ ರೈಲ್ವೆ ನಿಲ್ದಾಣದ ಬಳಿಕಾರನ್ನು ನಿಲ್ಲಿಸಲು ಹೇಳಿದ್ದಾರೆ. ಬಳಿಕ ಶ್ರೀಧರ ಅವರ ಮೇಲೆ ಹಲ್ಲೆ ನಡೆಸಿ ಅವರ ಬಳಿ ಇದ್ದ 3000 ರೂ. ನಗದು ಹಾಗೂ ವಾಚ್‌ ತೆಗೆದುಕೊಂಡಿದ್ದಾರೆ. ನಂತರ ಕುಂದಾಪುರದ ಆನೆಗುಡ್ಡೆ ಸಮೀಪದ ಎಟಿಎಂ ಬಳಿ ಕಾರನ್ನು ನಿಲ್ಲಿಸಿ ಹಣತರುವಂತೆ ಹೇಳಿದ್ದಾರೆ. ಹಣತರಲು ಹೋದ ಶ್ರೀಧರ್ ಸ್ಥಳದಿಂದ ಪರಾರಿಯಾಗಿದ್ದು, ಬಳಿಕ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles