Sunday, June 8, 2025

ಕಾನೂನಾತ್ಮಕವಾಗಿ ದಾಖಲೆ ಪರಿಶೀಲಿಸಿ, ಸ್ಥಳದ ಸರ್ವೆ ನಡೆಸಬೇಕು: ಭರತ್ ಶೆಟ್ಟಿ

ಮಂಗಳೂರು:ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿ ಎಂಬಲ್ಲಿ ಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾದಲ್ಲಿ ದೇವಸ್ಥಾನ ಪತ್ತೆಯಾಗಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆ ಇಂದು ತಾಂಬೂಲ ಪ್ರಶ್ನೆಗೆ ಮುಂದಾಗಿತ್ತು. . ಈ ವೇಳೆ ಮಳಲಿಯ ಮಸೀದಿ ಸ್ಥಳದಲ್ಲಿ ದೇವರು ಇರುವುದು ನಿಜ ಗೋಚರವಾದ ಹಿನ್ನೆಲೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ಈ ಕುರಿತು ಶಾಸಕ ಭರತ್ ಶೆಟ್ಟಿ ಪ್ರತಿಕ್ರಿಯಿಸಿದ್ದು, ಮಳಲಿ ಮಸೀದಿಯನ್ನು ನವೀಕರಣ ಮಾಡುವ ಸಂದರ್ಭ ದೇವಸ್ಥಾನ ಇರುವುದು ಗೋಚರವಾದ ಹಿನ್ನೆಲೆ ಇಲ್ಲಿನ ಸ್ಥಳೀಯರು ತಾಂಬೂಲ ಪ್ರಶ್ನೆ ಮಾಡುವ ವಿಚಾರವನ್ನು ಮುಂದಿಟ್ಟಿದ್ದಾರೆ. ಇದರಲ್ಲಿ ಸಕಾರಾತ್ಮಕ ಉತ್ತರ ಬಂದ್ರೆ ಕಾನೂನುಬದ್ಧ ಹೋರಾಟ ಮತ್ತು ಅಷ್ಟ ಮಂಗಲ ಪ್ರಶ್ನೆ ಮಾಡಿಸುವ ಚಿಂತನೆಯನ್ನ ಗ್ರಾಮದ ಜನರು ನಡೆಸಿದ್ದರು. ಇಂದು ಅಲ್ಲಿ ದೈವಿ ಶಕ್ತಿ ಇರುವುದು ಕಂಡುಬAದಿದೆ. ಇದಾದ ಬಳಿಕ ಕಾನೂನಾತ್ಮಕವಾಗಿ ದಾಖಲೆಗಳನ್ನು ಪರಿಶಿಲಸಿ, ಸರ್ವೆ ನಡೆಸಬೇಕು ಎನ್ನುವ ಬೇಡಿಕೆಯನ್ನು ಭಜರಂಗ ದಳದವರು ಇಟ್ಟಿದ್ದರು. ನಾವು ಕೂಡ ಇದೆ ಬೇಡಿಕೆಯನ್ನು ಇಡುತ್ತೇವೆ. ಇಲ್ಲಿನ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ಹೇಳಿದ್ದಾರೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles