ಕುಂದಾಪುರ: ಕುಂದಾಪುರದ ಉಪ್ಪಿನಕುದ್ರುವಿನ ಯುವತಿ ಶಿಲ್ಪಾ ದೇವಾಡಿಗ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಸಹೋದರ ಆಜೀಝ್ ಎಂಬ ಯುವಕನ ವಿರುದ್ಧ ಠಾಣೆಯಲ್ಲಿ ದೂರು ನಿಡಿದ್ದು, ಹಿಂದೂ ಸಂಘಟನೆಗಳು ಇದೊಂದು ಲವ್ ಜಿಹಾದ್ನಿಂದ ಆಗಿರುವ ಕೃತ್ಯ ಎಂದು ಹೇಳುತ್ತಿದೆ.
ಇದೀಗ ಈ ಬಗ್ಗೆ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಶ್ರೀಧರ್ ಬಿಜೂರು ಪ್ರತಿಕ್ರಿಯಿಸಿದ್ದು, ವಿಶ್ವಹಿಂದೂ ಪರಿಷತ್ನವರು ಶಿಲ್ಪಾ ಕುಟುಂಬದವರಿಗೆ ಸಾಂತ್ವಾನ ಹೇಳಿದ್ದೇವೆ. ಕುಂದಾಪುರ, ಬೈಂದೂರು ಪರಿಸರದಲ್ಲಿ ಯತೇಚ್ಚ ಲವ್ ಜಿಹಾದ್ ನಡೆಯುತ್ತಿದೆ. ಅಜೀಝ್ ಓರ್ವ ಇಸ್ಲಾಂ ಜಿಹಾದಿ. ಆಕೆಯನ್ನು ಲವ್ ಜಿಹಾದ್ ಮಾಡುವ ನಿಟ್ಟಿನಲ್ಲಿ ತಂತ್ರ ಮಾಡಲಾಗಿತ್ತು. ಮತಾಂತರಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಆತ ಮಾಡಿದ್ದ. ಮತಾಂತರಕ್ಕೆ ಸಂಬಂಧಿಸಿದ ಎಲ್ಲಾ ಪುರಾವೆಗಳನ್ನು ಇಲಾಖೆಗೆ ನೀಡಿದ್ದೇವೆ. ಇಸ್ಲಾಂ ಭಯೋತ್ಪಾದಕರನ್ನು ಮಟ್ಟ ಹಾಕಬೇಕಿದೆ. ಆರೋಪಿ ಮೇಲೆ ಹಲವು ಕ್ರಿಮಿನಲ್ ಕೇಸುಗಳಿವೆ. ಆರೋಪಿಯನ್ನು ಶೀಘ್ರ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು, ಯುವತಿಯನ್ನು ಪುಸಲಾಯಿಸಿ ಆಕೆ ಜೀವನ ಹಾಳು ಮಾಡಿ, ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಲಾಗಿದೆ ಎಂದು ಯುವತಿಯ ಸಹೋದರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ, ಬೈಂದೂರು ಪರಿಸರದಲ್ಲಿ ಯತೇಚ್ಚ ಲವ್ ಜಿಹಾದ್ ನಡೆಯುತ್ತಿದೆ:ವಿಹೆಚ್ಪಿ ಉಪಾಧ್ಯಕ್ಷ ಶ್ರೀಧರ್ ಬಿಜೂರು
Subscribe
Login
0 Comments