Monday, June 9, 2025

ನಮ್ಮ ಮನವಿ ಕಸದ ಬುಟ್ಟಿಗೆ ಸೇರುತ್ತಿದೆ: ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಗೌರವಾಧ್ಯಕ್ಷ ಪಿ.ಬಿ ಡೇಸಾ

ಮಂಗಳೂರು: ಇಲ್ಲಿನ ಕ್ರೈಸ್ತ ಧರ್ಮ ಪ್ರಾಂತ್ಯದಲ್ಲಿರುವ 130 ಚರ್ಚ್ ಗಳ ಆದಾಯ 500 ಕೋಟಿಗಿಂತ ಮೇಲಿದೆ. ಅದನ್ನು ರಾಜ್ಯದ ಬೀದರ್ ಸೇರಿ ಆಫ್ರಿಕಾ ದೇಶಗಳಲ್ಲಿ ಕ್ರೈಸ್ತ ಪ್ರಚಾರಕ್ಕಾಗಿ ಬಳಸುತ್ತಿದ್ದು, ಅದನ್ನು ನಮ್ಮದೇ ಪ್ರಾಂತ್ಯದ ಬಡವರಿಗೆ ನೀಡಬೇಕು ಎಂದು ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಗೌರವಾಧ್ಯಕ್ಷ ಪಿ.ಬಿ ಡೇಸಾ ಒತ್ತಾಯಿಸಿದ್ದಾರೆ.
ಅವರು ಮಂಗಳೂರು ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ರೈಸ್ತ ಸಮುದಾಯದೊಳಗೆ ತುಂಬಾ ಅಸಮಾಧಾನ ಇದೆ. ಕ್ರೈಸ್ತ ಧರ್ಮಗುರುಗಳು ಅನುಯಾಯಿಗಳಿಗೆ ಕೇವಲ ಕರ್ತವ್ಯ ಮಾತ್ರ ಹೇಳುತ್ತಾರೆಯೇ ಹೊರತು ತಮ್ಮ ಹಕ್ಕುಗಳ ಬಗ್ಗೆ ಹೇಳುತ್ತಿಲ್ಲ. 1972ರಲ್ಲಿ ಅಂದಿನ ಪೋಪ್ ನೇತೃತ್ವದ ಸಮಿತಿ ಧರ್ಮಗುರುಗಳು ಹಾಗೂ ಧರ್ಮಪ್ರಚಾರಕರು ಚರ್ಚ್ನ ಹಣಕಾಸಿನ ವಹಿವಾಟನ್ನು ಸಾರ್ವಜನಿಕರಿಗೆ ಬಿಟ್ಟುಕೊಟ್ಟು ನೀವು ಧಾರ್ಮಿಕ ವಿಭಾಗವನ್ನು ಮಾತ್ರ ನಡೆಸಬೇಕು ಎಂದು ಹೇಳಿದ್ದರು. ಆದರೆ ಅದನ್ನು ಗುಟ್ಟಾಗಿಟ್ಟು ಕ್ರೈಸ್ತ ಧರ್ಮಗುರುಗಳು ಆಸ್ಪತ್ರೆ, ಶಿಕ್ಷಣ ಸಂಸ್ಥೆ, ಪೆಟ್ರೋಲ್ ಪಂಪ್‌ಗಳ ಬ್ಯುಸಿನೆಸ್ ನಡೆಸುತ್ತಾರೆ. ಜೊತೆಗೆ ಇದರ ಲೆಕ್ಕ ಪತ್ರಗಳು ಸಾರ್ವಜನಿಕವಾಗಿ ಬಹಿರಂಗವಾಗುವುದಿಲ್ಲ ಎಂದು ಆರೋಪಿಸಿದರು.
ಈ ಬಗ್ಗೆ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಬಳಿ ಕಳೆದ ಕೆಲವು ವರ್ಷಗಳಿಂದ ಮನವಿ ಮಾಡುತ್ತಿದ್ದೇವೆ. ನಮ್ಮ ಮನವಿ ಕಸದ ಬುಟ್ಟಿಗೆ ಸೇರುತ್ತಿದೆ. ಕ್ರೈಸ್ತ ಸಮುದಾಯದ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಲ್ಲಿ ಕೋಟ್ಯಾಂತರ ಸಂಪತ್ತು ಇದೆ. ನಮ್ಮ ಹಣದ ಲೆಕ್ಕವನ್ನು ನಮಗೆ ನೀಡುತ್ತಿಲ್ಲ. ಇತ್ತೀಚೆಗೆ ಕ್ರೈಸ್ತ ಪ್ರಚಾರಕ್ಕೆ ರಾಜ್ಯದ ಬೀದರ್ ಸೇರಿ ಆಫ್ರಿಕಾ ದೇಶದಲ್ಲಿ ಹಣ ವಿನಿಯೋಗಿಸುತ್ತಿದ್ದಾರೆ ಎಂದರು.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles