ಬಂಟ್ವಾಳ: ವಾಹನಗಳು, ವಸ್ತುಗಳು, ವ್ಯಕ್ತಿಗಳು, ಕಾಣೆಯಾಗುವುದು ಮತ್ತು ಇದರ ಬಗ್ಗೆ ಪೊಲೀಸರಿಗೆ ದೂರು ಹೋಗುವುದು ಸಹಜ. ಆದರೆ ಬಂಟ್ವಾಳದಲ್ಲಿ ಪೊಲೀಸ್ ಠಾಣೆಗೆ ವಿಚಿತ್ರ ಪ್ರಕರಣ ಒಂದು ದಾಖಲಾಗಿರುವ ಘಟನೆ ವರದಿಯಾಗಿದೆ.
ನರಿಕೊಂಬು ಗ್ರಾಮದ ಪಂಚಾಯತ್ ವ್ಯಾಪ್ತಿಯ ನೆಲ್ಯಡ್ಕ ಎಂಬಲ್ಲಿ, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನಿರ್ಮಿಸಿದ ಬಾವಿ ಕಾಣೆಯಾಗಿದ್ದು, ಇದನ್ನು ಹುಡುಕಿಕೊಡುವಂತೆ ಆ ಗ್ರಾಮದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನಲ್ಲಿ 2012-13ನೇ ಸಾಲಿನ ಸಾರ್ವಜನಿಕ ತೆರೆದ ಬಾವಿಯನ್ನು ರೂ.73,305 ಅನುದಾನದಲ್ಲಿ ನಿರ್ಮಿಸಲಾಗಿತ್ತು. ಪ್ರಸ್ತುತ ತೆರೆದ ಬಾವಿಯನ್ನು ಸ್ಥಳೀಯ ನಿವಾಸಿ ದಯಾನಂದ ಪೂಜಾರಿ ಎಂಬುವವರು ಸಂಪೂರ್ಣವಾಗಿ ಮುಚ್ಚಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದಾರೆ. ಆದ್ದರಿಂದ ಅವರ ಮೇಲೆ ಕಾನೂನುಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ಬಾವಿ ಕಾಣೆಯಾಗಿದೆ ಹುಡುಕಿಕೊಡಿ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ ಪಿಡಿಓ
Subscribe
Login
0 Comments