ಮಂಗಳೂರು: ಮಳಲಿ ಮಸೀದಿಯಲ್ಲಿ ಹಿಂದೂ ದೇವಾಲಯ ಪತ್ತೆ ವಿಚಾರವಾಗಿ ತಾಂಬೂಲ ಪ್ರಶ್ನೆ ಇಟ್ಟಾಗ ದೇವರ ಸಾನಿಧ್ಯ ಇರುವುದು ಪತ್ತೆಯಾಗಿತ್ತು. ಈ ಹಿನ್ನೆಲೆ ಆ ಸ್ಥಳವನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು ಎಂದು ಹಿಂದೂ ಸಂಘಟನೆ ಮನವಿಯನ್ನು ಮಾಡಿತ್ತು. ಇದಕ್ಕೆ ಮಂಗಳೂರಿನ ಎಸ್ಡಿಪಿಐ ಬೃಹತ್ ಜನಾಧಿಕಾರ ಸಮಾವೇಶದಲ್ಲಿ ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಸಿನಿಮೀಯ ಡೈಲಾಗ್ ಹೊಡೆದು ಪ್ರಚೋದನಾಕಾರಿ ಭಾಷಣ ಮಾಡಿದ್ದು, ಎಸ್ಡಿಪಿಐನವರು ನಾವು ಗಲಭೆ ಪ್ರಿಯರಲ್ಲ. ಗಲಭೆ, ಕೊಲೆ ಪ್ರತಿಕಾರಗಳು ನಮಗೆ ಇಷ್ಟವಿಲ್ಲ ಎಂದಿದ್ದಾರೆ.
ಇನ್ನು ಮುಂದುವರಿದು, ಒಂದು ಉತ್ತಮ ಭವಿಷ್ಯವನ್ನು ಕಂಡುಕೊಳ್ಳಲು ಎಸ್ಡಿಪಿಐ ಹವಣಿಸುತ್ತಿದೆ. ಆದರೆ ಸಂಘ ಪರಿವಾರದವರಿಗೆ ಎಸ್ಡಿಪಿಐ ಸಂಘಟನೆಗೆ ಹೇಳಲು ಇರುವುದು ಇಷ್ಟೆ, ವೈಯ್ ಲೆನ್ಸ್, ವೈಯ್ ಲೆನ್ಸ್, ವೈಯ್ ಲೆನ್ಸ್, ವಿ ಡೋಂಟ್ ಲೈಕ್ ವೈಯ್ ಲೆನ್ಸ್ ವಿ ಅವೈಡ್, ಬಟ್ ವೈಯ್ ಲೆನ್ಸ್ ಲೈಕ್ಸ್ ಅಸ್, ವಿ ಕ್ಯಾನಾಟ್ ಅವೈಡ್ ಎಂದು ಕೆ.ಜಿ.ಎಫ್-2 ಸಿನಿಮಾದ ಡೈಲಾಗ್ ಹೊಡೆಯುವುದರ ಮೂಲಕ ಪ್ರಚೋದನಾಕಾರಿ ಹೇಳಿಕೆಯನ್ನು ನೀಡಿದ್ದಾರೆ.
ಈ ಮೊದಲು ಅದೇ ಸಮಾವೇಶದಲ್ಲಿ ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ಮಳಲಿ ಮಸೀದಿಯ ಒಂದು ಹಿಡಿ ಮರಳು ಕೊಡುವುದಿಲ್ಲ. ಮಸೀದಿ ಬಿಟ್ಟುಕೊಡುತ್ತಾರೆ ಅನ್ನುವ ಕನಸು ಕಾಣಬೇಡಿ. ಈ ದೇಶ ನಮ್ಮದು, ಇದಕ್ಕಾಗಿ ರಕ್ತ ಹರಿಸಿದ್ದೇವೆ. ಡಿಕೆಶಿ ಮಳಲಿ ಮಸೀದಿ ವಿಚಾರದಲ್ಲಿ ಮಾತಾಡದಂತೆ ತಮ್ಮ ಶಾಸಕರಿಗೆ ಹೇಳಿದ್ದಾರೆ. ಕಾಂಗ್ರೆಸ್ ಮುಸ್ಲಿಮರ ಪರ ಅಲ್ಲ ಅನ್ನೋದನ್ನ ತಿಳಿದುಕೊಳ್ಳಿ ಎಂದು ಹೇಳಿದ್ದಾರೆ.
ಭುಗಿಲೆದ್ದ ಮಳಲಿ ಮಸೀದಿ ವಿವಾದ:ವೈಯ್ ಲೆನ್ಸ್, ವೈಯ್ ಲೆನ್ಸ್ ಸಿನಿಮೀಯ ಡೈಲಾಗ್ ಹೊಡೆದ ರಿಯಾಝ್ ಫರಂಗಿಪೇಟೆ
Subscribe
Login
0 Comments