ಬೆಳ್ತಂಗಡಿ: ಪಶ್ಚಿಮ ಘಟ್ಟ ಹಾಗೂ ಅರಣ್ಯ ಪ್ರದೇಶದಲ್ಲಿ ಮಾತ್ರ ಕಂಡು ಬರುವ ವಿಷರಹಿತ ‘ಸಾರಿಬಾಳ’ ಹಾವು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ದಾಮೋದರ್ ಎಂಬವರ ಮನೆಯಲ್ಲಿ ಪತ್ತೆಯಾಗಿದ್ದು, ಬೆಳ್ತಂಗಡಿಯ ಸ್ನೇಕ್ ಅಶೋಕ್ ಲಾಯಿಲ ಅವರು ಸುರಕ್ಷಿತವಾಗಿ ಹಾವನ್ನು ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.
ಸಾರಿಬಾಳ ಅಳಿವಿನಂಚಿನಲ್ಲಿರುವ ವಿಷರಹಿತ ಹಾವು, ಇದರ ಸಂತತಿ ಕೂಡ ಕಡಿಮೆಯಾಗಿದೆ. ಸ್ನೇಕ್ ಅಶೋಕ್ ಅವರು 6ವರ್ಷದ ಹಿಂದೆ ಲಾಯಿಲ ಗ್ರಾಮದ ಕಿಂಡಾಜೆ ಎಂಬಲ್ಲಿ ಸಾರಿಬಾಳ ಹಾವನ್ನು ಮೊದಲ ಬಾರಿ ಹಿಡಿದ್ದಿದ್ದರು. ಇದಾದ ಬಳಿಕ ಧರ್ಮಸ್ಥಳದಲ್ಲಿ ಎರಡನೇ ಭಾರಿ ಸುಮಾರು 7 ಅಡಿ ಉದ್ದದ ಹಾವು ಪತ್ತೆಯಾಗಿದೆ.
ಧರ್ಮಸ್ಥಳದಲ್ಲಿ ಅಪರೂಪದ ‘ಸಾರಿಬಾಳ’ ಹಾವು ಪತ್ತೆ: ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಸ್ನೇಕ್ ಅಶೋಕ್
Subscribe
Login
0 Comments