ಮಂಗಳೂರು: ಮಂಗಳೂರು ಯೂನಿವರ್ಸಿಟಿ ಕಾಲೇಜಿನಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದ್ದು, ೧೫ ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ಮತ್ತೆ ಕಾಲೇಜ್ ಗೆ ಹಿಜಾಬ್ ಧರಿಸಿ ಬಂದಿದ್ದಾರೆ. ವಿದ್ಯಾರ್ಥಿನಿಯರ ನಡೆಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅಸಮಾಧಾನಗೊಂಡಿದ್ದು, ಹೈಕೋರ್ಟ್ ಆದೇಶವನ್ನು ಕಾಲೇಜಿನಲ್ಲಿ ಪಾಲಿಸಲಾಗುತ್ತಿದೆ. ಹೈಕೋರ್ಟ್ ಆದೇಶವನ್ನು ಉಲ್ಲಂಘಿಸುವ ಪ್ರಯತ್ನ ನಡೆಯಬಾರದು ಎಂದಿದ್ದಾರೆ.
ಈ ಕುರಿತು ಮಂಗಳೂರಿನಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿನಿಯರು ಇವತ್ತು ಮತ್ತೆ ಕಾಲೇಜಿಗೆ ಆಗಮಿಸಿದ್ದಾರೆ. ವಿದ್ಯಾಭ್ಯಾಸದ ಅವಶ್ಯಕತೆ ಬಗ್ಗೆ ಪ್ರಾಂಶುಪಾಲರು ಮನವೊಲಿಸುವ ಪ್ರಯತ್ನ ಮಾಡಲಿದ್ದಾರೆ. ಅದರಲ್ಲಿ ಯಶಸ್ವಿಯಾದರೆ ವಿದ್ಯಾರ್ಥಿನಿಯರು ತರಗತಿಗೆ ಬರಬಹುದು. ಯಾರೇ ಇದ್ದರೂ ಹೈಕೋರ್ಟ್ ಆದೇಶ ಧಿಕ್ಕರಿಸಲು ಸರ್ಕಾರಕ್ಕೆ ಸಾಧ್ಯವಿಲ್ಲ. ಯಾವ ಅಧಿಕಾರಿಗಳ ಬಳಿ ಹೋದರೂ ಕೋರ್ಟ್ ಆದೇಶ ಉಲ್ಲಂಘಿಸುವಂತಿಲ್ಲ. ಪಿಯುಸಿಯಲ್ಲಾದ ಹಿಜಾಬ್ ವಿವಾದದಂತೆ ಇಲ್ಲೂ ಆಗಬಹುದು. ವಿದ್ಯಾರ್ಥಿನಿಯರು ಯಾರದ್ದೋ ಕುಮ್ಮಕ್ಕಿಗೆ ತಪ್ಪು ದಾರಿಗೆ ಹೋಗದಿರುವುದು ಉತ್ತಮ. ಎಸ್ಡಿಪಿಐ ಮುಖಂಡರು ಜನರ ದಾರಿ ತಪ್ಪಿಸುತ್ತಿದ್ದಾರೆ. ಕೋರ್ಟ್ಗೆ ವಿರುದ್ಧವಾಗಿ ಮಾತನಾಡಿದ್ರೆ ಕ್ರಮವಾಗುತ್ತದೆ. ವಿದ್ಯಾರ್ಥಿಗಳ ಜೀವನ ನಿರೂಪಿಸುವಲ್ಲಿ ಎಸ್ಡಿಪಿಐ ನಾಯಕರ ಕೊಡುಗೆ ಶೂನ್ಯ ಎಂದು ಎಸ್ಡಿಪಿಐ ಕಿಡಿಕಾರಿದ್ದಾರೆ.
ಎಸ್ಡಿಪಿಐ ಮುಖಂಡರು ಜನರ ದಾರಿ ತಪ್ಪಿಸುತ್ತಿದ್ದಾರೆ: ಶಾಸಕ ವೇದವ್ಯಾಸ ಕಾಮತ್
Subscribe
Login
0 Comments