ಮಂಗಳೂರು: ದುಬಾರಿ ಬೈಕ್ನಲ್ಲಿ ಬಂದ ಖದೀಮರು ಬಲ್ಬ್ಗಳನ್ನು ಕದ್ದೊಯ್ದ ಘಟನೆ ಉಳ್ಳಾಲದ ಬಸ್ ನಿಲ್ದಾಣದ ಬಳಿಯ ಸೂಪರ್ ಮಾರ್ಕೆಟ್ ಬಳಿ ನಡೆದಿದೆ.
ಖದೀಮರು ಆರ್15 ಬೈಕ್ನಲ್ಲಿ ಬಂದು ನ್ಯೂ ಡೈಲಿ ಫ್ರೆಶ್ ಸೂಪರ್ ಮಾರ್ಕೆಟ್ ಹೊರಗಡೆ ಇದ್ದ ಬಲ್ಬ್ಗಳನ್ನು ಕದ್ದೊಯ್ದಿದ್ದಾರೆ. ಬೈಕ್ನಲ್ಲಿ ಬಂದ ಇಬ್ಬರು ಯುವಕರ ಪೈಕಿ ಹಿಂಬದಿ ಸವಾರ ಈ ಕೃತ್ಯ ಎಸಗಿದ್ದಾನೆ. ಈ ಘಟನೆ ಬುಧವಾರ ತಡರಾತ್ರಿ 2.17ರ ವೇಳೆಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಈ ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.