Sunday, June 8, 2025

ಶಾಂತಿನಗರ ಕ್ರೀಡಾಂಗಣದ ಕಾಮಗಾರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆಗಿದೆ: ಕೆಪಿಸಿಸಿ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ

ಸುಳ್ಯ: ಸುಳ್ಯ ಶಾಂತಿನಗರದ ತಾಲೂಕು ಕ್ರೀಡಾಂಗಣ ಕಾಮಗಾರಿ ಈಗ ರಾಜಕೀಯ ಚರ್ಚೆಯಾಗಿ ಮಾರ್ಪಟ್ಟಿದೆ. ಇಂದು ಸುಳ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಮುಖಂಡರು ಶಾಂತಿನಗರ ಕ್ರೀಡಾಂಗಣದ ಕಾಮಗಾರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಹೇಳಿದರು.
ಕ್ರೀಡಾಂಗಣ ಮಾಡುವ ಯೋಜನೆ 1996ರಲ್ಲಿ ತಯಾರಾಗಿದೆ. 2006ರಲ್ಲಿ ಈ ಯೋಜನೆ ಪ್ರಾರಂಭವಾಗಿದೆ. ಇವತ್ತು ನೋಡುವಾಗ ಇನ್ನು ಎಷ್ಟು ವರ್ಷದ ಬಳಿಕ ಜನರ ಉಪಯೋಗಕ್ಕೆ ಸಿಕ್ಕಿತು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಇಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ವಾಗಿದೆ. ಕ್ರೀಡಾಂಗಣದ ಅಭಿವೃದ್ಧಿಯನ್ನು ಹೆಸರಲ್ಲಿನಲ್ಲಿ ಕ್ರೀಡಾಂಗಣದ ಪರಿಸರದಿಂದ ಲಕ್ಷಗಟ್ಟಲೆ ಕೆಂಪುಕಲ್ಲು ಕಡಿದು ಮಾರಾಟ ಮಾಡಲಾಗಿದೆ. ಈ ಕ್ರೀಡಾಂಗಣವನ್ನು 200ಮೀ.ನಿಂದ 400ಮೀ.ಗೆ ಪರಿವರ್ತಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಕಲ್ಲು ಕಡಿದ ಗುಂಡಿಯನ್ನು ಮುಚ್ಚಲು 30 ಲಕ್ಷ ವಿನಿಯೋಗಿಸಲಾಗಿದೆ. ಇದು ಹಣದ ದುರುಪಯೋಗವಲ್ಲವೇ? ನಾವು ಸಚಿವರ ಬದ್ಧತೆಯನ್ನು ಪ್ರಶ್ನಿಸುತ್ತಿದ್ದೇವೆ. ಅವರದ್ದು ಭರವಸೆ ಮಾತ್ರ. ಸಚಿವರು ಜನರ ಪ್ರಶ್ನೆಗೆ ಉತ್ತರ ಕೊಡಬೇಕು. ಅಧಿಕಾರಿಗಳು ಉತ್ತರ ಕೊಡಬೇಕು. ಅಂತಹ ದುರ್ಗಮ ಪ್ರದೇಶದಲ್ಲಿ 400 ಮೀ. ಟ್ರ‍್ಯಾಕ್ ಗೆ ಪರ್ಮಿಷನ್ ಕೊಟ್ಟವರಾದರೂ ಯಾರು?. 30 ವರ್ಷದಿಂದ ಶಾಸಕರಾಗಿ ಒಂದು ಸ್ಟೇಡಿಯಂ ಕೆಲಸ ಪೂರ್ಣಗೊಳಿಸಲಾಗದಿದ್ದರೆ ಏನು ಹೇಳಬೇಕು? ಇನ್ನು ಎಷ್ಟು ದಿನ ಹೀಗೆ ಹೇಳ್ತಾರೆ? 110 ಕೆವಿ ವಿಚಾರದಲ್ಲಿ ಅರಣ್ಯದೊಳಗಡೆ ಯಾರ ಯಾರ ಸರ್ವೆ ನಂಬರ್ ನಲ್ಲಿ ಲೈನ್ ಹಾದು ಹೋಗ್ತದೆ? ಸುಳ್ಯದವರು ಮೂವರು ಸಂಸದರಾಗಿದ್ದಾರೆ. ಒಬ್ಬರು ಸಚಿವರಿದ್ದಾರೆ.
ಇಲ್ಲಿ ಕೆಸರು ನೀರು, ವಿದ್ಯುತ್ ಸರಿ ಇಲ್ಲ, ಕ್ರೀಡಾಂಗಣ ಇಲ್ಲ. ಕಾಂಗ್ರೆಸ್‌ನವರಾದ ನಾವು ಆತ್ಮಾವಲೋಕನ ಮಾಡುವಂತಾಗಿದೆ. ನಮ್ಮ ಶಾಸಕರು ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ವಕ್ತರರಾದ ನಂದರಾಜ್ ಸಂಕೇಶ, ಭವಾನಿಶಂಕರ ಕಲ್ಮಡ್ಕ ಉಪಸ್ಥಿತರಿದ್ದರು. ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಪಿ.ಎಸ್.ಗಂಗಾಧರ ವಂದಿಸಿದರು.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles