Sunday, June 8, 2025

ಕಾರ್ಯಕರ್ತ ಹರ್ಷ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್

ಮಂಗಳೂರು: ಶಿವಮೊಗ್ಗದಲ್ಲಿ ಹತ್ಯೆಯಾದ ಬಜರಂಗದಳ ಕಾರ್ಯಕರ್ತ ಹರ್ಷ ಅವರ ವಿರುದ್ಧ ಮಂಗಳೂರು ಮುಸ್ಲಿಂಸ್ ಫೇಸ್‌ಬುಕ್ ಪೇಜ್ ಅವಹೇಳನಕಾರಿ ಬರಹ ಪೋಸ್ಟ್ ಮಾಡಿದೆ.

ಮಂಗಳೂರು ಮುಸ್ಲಿಂಸ್ ಹೆಸರಿನ ಫೇಸ್‌ಬುಕ್ ಪೇಜ್‌ನಲ್ಲಿ ಅವಹೇಳನಕಾರಿ ಬರಹ ಹಂಚಿಕೊಳ್ಳಲಾಗಿದೆ. ಇದರಲ್ಲಿ “ಕೊಲೆಯಾದವನು ಶಿವಮೊಗ್ಗದ ಬೀದಿ ನಾಯಿ ಅಂದು 2015 ರಲ್ಲಿ ಪ್ರವಾದಿ ನಿಂದನೆ ಮಾಡಿದ್ದನ್ನು ಬಲವಾಗಿ ನಮ್ಮ ಮಂಗಳೂರು ಮುಸ್ಲಿಂಸ್ ಪೇಜ್ ಖಂಡಿಸಿತ್ತು. ಹಾಗೂ ಎಚ್ಚರಿಕೆಯನ್ನು ನೀಡಿತ್ತು. ಪ್ರವಾದಿ ನಿಂದನೆ ಮಾಡಿದ ಯಾರೇ ಆದರೂ ಅವರ ಆಯುಷ್ಯ ಎಷ್ಟೇ ಪ್ರಭಾವಿ ಆದರೂ ಎಂದಿಗೂ ವೃದ್ಧಿ ಆಗಲಾರದು. ಇದೆ ರೀತಿ ಪ್ರವಾದಿ ನಿಂದನೆ ಮಾಡಿರುವ ಅಜಿತ್ ಹನುಮಕ್ಕನವರ್ ನಿನ್ನನ್ನು ಮಂಗಳೂರು ಮುಸ್ಲಿಂಸ್ ಮರೆತಿಲ್ಲ” ಎಂದು ಬರಹ ಹಂಚಿಕೊಳ್ಳಲಾಗಿದೆ. ಈ ರೀತಿ ಬರಹ ಹಂಚಿಕೊಂಡಿರುವ ಮಂಗಳೂರು ಮುಸ್ಲಿಂಸ್ ಫೇಸ್‌ಬುಕ್‌ ಪೇಜ್ ಕುರಿತು ಮಂಗಳೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles