ಹೈದರಾಬಾದ್: ಭಕ್ತಿ ಚಳುವಳಿಯ ಹರಿಕಾರ ವೈಷ್ಣವ ಸಂತ ರಾಮಾನುಜಾಚಾರ್ಯರ ಬೃಹತ್ ಪ್ರತಿಮೆಯನ್ನು ತೆಲಂಗಾಣದ ಶಂಶಾಬಾದ್ ನ ಮುಚ್ಚಿಂತಲ್ ನಲ್ಲಿ ಫೆಬ್ರವರಿ 5 ರಂದು ಪ್ರಧಾನಿ ಮೋದಿ ಅವರು ಅನಾವರಣಗೊಳಿಸಿದ್ದರು. ಪ್ರಸ್ತುತ ಈ ಸಮಾನತೆ ಸಾರುವ ಪ್ರತಿಮೆಯು ಇಂಡಿಯನ್ ಬುಕ್ ಆಫ್ ರೆಕಾರ್ಡ್ ಪಟ್ಟಿಗೆ ಸೇರಿದೆ.
ಇಂಡಿಯನ್ ಬುಕ್ ಆಫ್ ರೆಕಾರ್ಡ್ ಈ ಪ್ರತಿಮೆಯನ್ನು ಪ್ರಶಂಸಿಸುವುದರ ಜೊತೆಗೆ ಗೌರವಿಸಿದೆ. ರಾಮನುಜಾಚಾರ್ಯರ 1003 ನೇ ಜನ್ಮದಿನದ ನೆನಪಿಗಾಗಿ 45 ಎಕರೆ ಪ್ರದೇಶದಲ್ಲಿ 216 ಅಡಿಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
ರಾಮನುಜಾಚಾರ್ಯರ ಪ್ರತಿಮೆಯನ್ನು ಸ್ಥಾಪಿಸುವ ಕನಸು ತ್ರಿದಂಡಿ ಚಿನ್ನಜೀಯರ್ ಸ್ವಾಮೀಜಿ ಅವರದ್ದು, ಇವರ ಸಾಧನೆಯನ್ನು ಗುರುತಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಶೀರ್ಷಿಕೆಯನ್ನು ನೀಡಿ ಗೌರವಿಸಿದೆ. ಈ ಪ್ರತಿಮೆಯು ವಿಶ್ವದ ಎರಡನೇ ಅತಿ ಎತ್ತರದ ಕುಳಿತಿರುವ ಭಂಗಿಯ ಪ್ರತಿಮೆ ಆಗಿದೆ.