Tuesday, June 10, 2025

ಮಳಲಿಯಲ್ಲಿ ದರ್ಗಾ ಕೆಡವಿದಾಗ ದೇವಸ್ಥಾನ ಪತ್ತೆ:ಸಾನಿಧ್ಯ ಮಹತ್ವ ತಿಳಿಯಲು ತಾಂಬೂಲ ಪ್ರಶ್ನೆ ಮೊರೆ ಹೋದ ವಿಹೆಚ್‌ಪಿ

ಮಂಗಳೂರು: ನವೀಕರಣಕ್ಕಾಗಿ ದರ್ಗಾ ಕೆಡವಿದಾಗ ದೇವಸ್ಥಾನ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಜಾಗದ ಧಾರ್ಮಿಕ ಮಹತ್ವ ತಿಳಿಯಲು ಹಿಂದೂ ಸಂಘಟನೆ ನಿರ್ಧರಿಸಿದೆ.

ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿ ಎಂಬಲ್ಲಿ ಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾದಲ್ಲಿ ದೇವಸ್ಥಾನ ಪತ್ತೆಯಾಗಿತ್ತು. ಈ ಹಿನ್ನೆಲೆ ಸ್ಥಳದ ಮಹತ್ವವನ್ನು ತಿಳಿಯಲು ಮುಂದಾಗಿರುವ ವಿಶ್ವ ಹಿಂದೂ ಪರಿಷತ್ ಗ್ರಾಮಸ್ಥರ ಜೊತೆ ಸೇರಿ ತಾಂಬೂಲ ಪ್ರಶ್ನೆಗೆ ದಿನಾಂಕ ನಿಗದಿ ಮಾಡಿದೆ. 25ನೇ ತಾರೀಖಿನ ಒಳಗಾಗಿ ತಾಂಬೂಲ ಪ್ರಶ್ನೆ ಇಡಲು ತೀರ್ಮಾನಿಸಿದ್ದು, ಆ ಮೂಲಕ ಅಲ್ಲಿ ಇರುವ ಸಾನಿಧ್ಯ ಯಾವುದು ಎನ್ನುವುದನ್ನು ತಿಳಿಯಲು ಮುಂದಾಗಿದೆ.


ಅಲ್ಲಿ ದೈವಿಶಕ್ತಿವಿರುವ ಬಗ್ಗೆ ಹಿಂದೂ ಸಂಘಟನೆಯು ಬಲವಾಗಿ ನಂಬಿದ್ದು, ಈ ದೇವಸ್ಥಾನದ ಹೋರಾಟಕ್ಕೆ ಸಮಿತಿಗಳನ್ನು ರಚನೆ ಮಾಡಲು ತಿರ್ಮಾನಿಸಿದೆ. ಮಸೀದಿ ಕಮಿಟಿಯ ಇಚ್ಛಿಸಿದಲ್ಲಿ ಮಾತುಕತೆ ಮೂಲಕ ರಾಜಿಗೆ ಸಿದ್ಧವಾಗಿರುವುದಾಗಿ ತಿಳಿಸಿರುವ ಹಿಂದೂ ಸಂಘಟನೆ, ರಾಜಿ ಒಪ್ಪದಿದ್ದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles