ಮಂಗಳೂರು: ನವೀಕರಣಕ್ಕಾಗಿ ದರ್ಗಾ ಕೆಡವಿದಾಗ ದೇವಸ್ಥಾನ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಜಾಗದ ಧಾರ್ಮಿಕ ಮಹತ್ವ ತಿಳಿಯಲು ಹಿಂದೂ ಸಂಘಟನೆ ನಿರ್ಧರಿಸಿದೆ.
ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿ ಎಂಬಲ್ಲಿ ಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾದಲ್ಲಿ ದೇವಸ್ಥಾನ ಪತ್ತೆಯಾಗಿತ್ತು. ಈ ಹಿನ್ನೆಲೆ ಸ್ಥಳದ ಮಹತ್ವವನ್ನು ತಿಳಿಯಲು ಮುಂದಾಗಿರುವ ವಿಶ್ವ ಹಿಂದೂ ಪರಿಷತ್ ಗ್ರಾಮಸ್ಥರ ಜೊತೆ ಸೇರಿ ತಾಂಬೂಲ ಪ್ರಶ್ನೆಗೆ ದಿನಾಂಕ ನಿಗದಿ ಮಾಡಿದೆ. 25ನೇ ತಾರೀಖಿನ ಒಳಗಾಗಿ ತಾಂಬೂಲ ಪ್ರಶ್ನೆ ಇಡಲು ತೀರ್ಮಾನಿಸಿದ್ದು, ಆ ಮೂಲಕ ಅಲ್ಲಿ ಇರುವ ಸಾನಿಧ್ಯ ಯಾವುದು ಎನ್ನುವುದನ್ನು ತಿಳಿಯಲು ಮುಂದಾಗಿದೆ.
ಅಲ್ಲಿ ದೈವಿಶಕ್ತಿವಿರುವ ಬಗ್ಗೆ ಹಿಂದೂ ಸಂಘಟನೆಯು ಬಲವಾಗಿ ನಂಬಿದ್ದು, ಈ ದೇವಸ್ಥಾನದ ಹೋರಾಟಕ್ಕೆ ಸಮಿತಿಗಳನ್ನು ರಚನೆ ಮಾಡಲು ತಿರ್ಮಾನಿಸಿದೆ. ಮಸೀದಿ ಕಮಿಟಿಯ ಇಚ್ಛಿಸಿದಲ್ಲಿ ಮಾತುಕತೆ ಮೂಲಕ ರಾಜಿಗೆ ಸಿದ್ಧವಾಗಿರುವುದಾಗಿ ತಿಳಿಸಿರುವ ಹಿಂದೂ ಸಂಘಟನೆ, ರಾಜಿ ಒಪ್ಪದಿದ್ದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದೆ.