Sunday, June 8, 2025

ಫೆ.26ಕ್ಕೆ ನಡೆಯಲಿದೆ ಐಕಳ ಕಾಂತಾಬಾರೆ-ಬೂದಾಬಾರೆ ಕಂಬಳ:ಡಾ.ದೇವಿಪ್ರಸಾದ್ ಶೆಟ್ಟಿ

ಮುಲ್ಕಿ: ಕೊರೊನಾ ಕಾರಣಕ್ಕೆ ಸ್ಥಗಿತಗೊಂಡಿದ್ದ ಕಂಬಳ ಕೂಟ ಫೆ.5ರಿಂದ ಪುನರಾರಂಭಗೊಳ್ಳಲಿದೆ. ದೇವರ ಕಂಬಂಳವೆಂದು ಪ್ರಸಿದ್ಧಿ ಪಡೆದ ಐಕಳ ಬಾವ ಕಾಂತಬಾರೆ-ಬೂದಾಬಾರೆ ಕಂಬಳ ಫೆ.26ರಂದು ನಡೆಯಲಿದೆ.

ಈ ಕುರಿತು ಕಂಬಳ ಸಮಿತಿ ಸಭೆಯಲ್ಲಿ ಮಾಹಿತಿ ನೀಡಿರುವ ಸಮಿತಿ ಅಧ್ಯಕ್ಷ ಐಕಳಬಾವ ಡಾ.ದೇವಿಪ್ರಸಾದ್ ಶೆಟ್ಟಿ ಜ.30ರಂದು ನಡೆಯಬೇಕಿದ್ದ ಐಕಳ ಬಾವ ಕಾಂತಬಾರೆ-ಬೂದಾಬಾರೆ ಕಂಬಳ ಕೋವಿಡ್ ಕಾರಣಕ್ಕೆ ಮುಂದೂಡಲಾಗಿ ಇದೀಗ ಫೆ.26ರಂದು ನಡೆಯಲಿದೆ ಎಂದರು.

ಇನ್ನು ಕಂಬಳ ದಿನ ಸಂಜೆ ಸಭಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಸಂದರ್ಭ ಧಾರ್ಮಿಕ, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು. ಈ ವೇಳೆ ಮೂರು ತಿಂಗಳ ಹಿಂದೆ ನಿಧನರಾದ ಕಂಬಳದಲ್ಲಿ ಡೋಲು ವಾದಕರಾಗಿ ಸೇವೆ ಸಲ್ಲಿಸುತ್ತಿದ್ದ ಮುದರ ಗೋಪಾಲ ಅವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.

ಸಮಿತಿ ಸಭೆಯಲ್ಲಿ ಐಕಳಬಾವ ಕಾಂತಬಾರೆ-ಬೂದಾಬಾರೆ ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಚಿತ್ತರಂಜನ ಭಂಡಾರಿ ಐಕಳಬಾವ, ಕೋಶಾಧಿಕಾರಿ ಪ್ರಕಾಶ ಹೆಗ್ಡೆ, ಇನ್ನಿತರರು ಉಪಸ್ಥಿತರಿದ್ದರು.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles