ಬೈಂದೂರು: ಶ್ರೀ ಮೂಕಾಂಬಿಕ ಭತ್ತ ಬೆಳೆಗಾರರ ಒಕ್ಕೂಟ ಬೈಂದೂರು ಪ್ರವರ್ತಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ನಬಾರ್ಡ್ ಸಂಸ್ಥೆ ಬೆಂಗಳೂರು ವತಿಯಿಂದ ಮೂಕಾಂಬಿಕ ಭತ್ತಬೆಳೆಗಾರರ ಒಕ್ಕೂಟದ ವಾರ್ಷಿಕ ಮಹಾಸಭೆಯು ಬೈಂದೂರು ತಾಲೂಕಿನ ನಾಗೂರು ಗೋಪಾಲಕೃಷ್ಣ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ಬಿ.ಸಿ ಟ್ರಸ್ಟ್ ಕೇಂದ್ರ ಕಚೇರಿ ಧರ್ಮಸ್ಥಳದ ಕೃಷಿ ಪ್ರಾದೇಶನಾಲಯದ ಹಿರಿಯ ಪ್ರಾದೇಶಿಕ ನಿರ್ದೇಶಕರಾದ ಮನೋಜ್ ಮಿನೇಜಸ್ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಕಾಂಬಿಕ ಭತ್ತ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಚಂದ್ರ ಪೂಜಾರಿ ವಹಿಸಿದ್ದರು. ಭತ್ತ ಬೆಳೆಗಾರ ಒಕ್ಕೂಟಕ್ಕೆ ಉತ್ತಮ ರೀತಿಯಲ್ಲಿ ಬೆಂಬಲ, ಸಹಕಾರವನ್ನು ನೀಡಿ ಉತ್ತಮ ಸಾಧನೆ ಮಾಡಿರುವ ಒಕ್ಕೂಟದ ಸದಸ್ಯರಾದ ಲಲಿತಮ್ಮ ಮತ್ತು ಶಶಿಕುಮಾರ್ ರವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಿರಿಧಾನ್ಯ ಘಟಕ ಧಾರವಾಡದ ಹಿರಿಯ ನಿರ್ದೇಶಕ ದಿನೇಶ್.ಎಂ, ತಾಲ್ಲೂಕಿನ ಹಿರಿಯ ಯೋಜನಾಧಿಕಾರಿ ಶಶಿರೇಖಾ ಪಿ, ಎಫ್.ಪಿ.ಸಿ ಯೋಜನಾಧಿಕಾರಿ ನಿಖಿಲೇಶ್ ಎಮ್, ಮುಕಾಂಬಿಕಾ ಭತ್ತಬೆಳೆಗಾರ ಒಕ್ಕೂಟದ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್, ಭತ್ತ ಬೆಳೆಗಾರರ ಒಕ್ಕೂಟದ ನಿರ್ದೇಶಕರಾದ ಮಂಜಯ್ಯ ಶೆಟ್ಟಿ, ರವಿರಾಜ್ ಪೂಜಾರಿ, ಶಿವರಾಮ ಶೆಟ್ಟಿ, ಕಿರಣ್ ಕುಮಾರ್, ಸುರೇಂದ್ರ ನಾಯ್ಕ್, ರಾಜು ಪೂಜಾರಿ, ಗೀತಾ, ಶ್ರೀಮತಿ ನೀಲು, ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿಗಳಾದ ತಿಮ್ಮಯ್ಯನಾಯ್ಕ್ , ಸದಾನಂದ, ಉಲ್ಲಾಸ ಮೇಸ್ತ, ಕೃಷಿ ಅಧಿಕಾರಿಗಳಾದ ಚೇತನ್ ಕುಮಾರ್, ಮಂಜುನಾಥ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮೇಲ್ವಿಚಾರಕರಾದ ರವಿಶಂಕರ್, ರಾಘವೇಂದ್ರ ನಿರೂಪಿಸಿ, ಕ್ಷೇತ್ರದ ಹಿರಿಯ ಯೋಜನಾಧಿಕಾರಿ ಶಶಿರೇಖಾ.ಪಿ ಸ್ವಾಗತಿಸಿದರು.