Saturday, June 7, 2025

ಬೆಂಗಳೂರಿನ ಅದೃಷ್ಯ ಸ್ವಯಂಸೇವಾ ತಂಡದಿಂದ ಮಜೂರಿನ ಶ್ರೀರಾಮ ಶಾಲೆಗೆ ಸುಣ್ಣ ಬಣ್ಣದ ಚಿತ್ತಾರ

 ಕಾಪು: 105 ವರ್ಷ ಇತಿಹಾಸ ಇರುವ ಮೈಸೂರಿನ ಶ್ರೀರಾಮ ಶಾಲೆಗೆ ಬೆಂಗಳೂರಿನ ಅದೃಷ್ಯ ಸ್ವಯಂ ಸೇವಾ ತಂಡದ ಸದಸ್ಯರು ಆಗಮಿಸಿ, ಶಾಲೆಗೆ ಸುಣ್ಣ-ಬಣ್ಣ ಬಳಿದಿದ್ದು, ಸುಂದರ ಚಿತ್ತಾರ ಮೂಡಿಸಿದ್ದಾರೆ.

ಸಂಸ್ಥೆಯ ಸದಸ್ಯರೊಬ್ಬರು ಮಾತನಾಡಿ, ನಾವು ಬೆಂಗಳೂರಿನ ಅದೃಷ್ಯ ತಂಡದ ಸದಸ್ಯರು ವಿದ್ಯಾವರ್ಣವೆಂಬ ಯೋಜನೆಯಲ್ಲಿ ನಮ್ಮ ಕಲಾವಿದರು, ಸರ್ಕಾರಿ ಶಾಲೆಗಳಿಗೆ ಸುಣ್ಣ ಬಣ್ಣ ಬಳಿಯುತ್ತೇವೆ. ಇದರಲ್ಲಿ ಮಕ್ಕಳನ್ನು ಆಕರ್ಷಿಸುವ ಚಿತ್ತಾರಗಳನ್ನ ಹಾಕುತ್ತೇವೆ. ಎಲ್ಲಾ ಖರ್ಚು ವೆಚ್ಚವನ್ನು ನಮ್ಮ ಸಂಸ್ಥೆಯೇ ಭರಿಸುತ್ತದೆ ಎಂದರು.
ಶಾಲೆಯ ಮಾಜಿ ಮುಖ್ಯೋಪಾಧ್ಯಾಯ ನಿರ್ಮಲ್ ಕುಮಾರ್ ಹೆಗಡೆ ಮಾತನಾಡಿ, ನಮ್ಮ ಶಾಲೆ 105 ವರ್ಷ ಇತಿಹಾಸದ ಶಾಲೆ. ಬೆಂಗಳೂರಿನ ಅದೃಷ್ಯ ತಂಡ ಸ್ವಯಂ ಪ್ರೇರಿತರಾಗಿ ಇಲ್ಲಿಗೆ ಆಗಮಿಸಿ, ಶಾಲೆಗೆ ಬಣ್ಣ ಹಾಗೂ ಬಣ್ಣದ ಚಿತ್ತಾರ ಬರೆದು ಮಕ್ಕಳಿಗೆ ಶಾಲೆಗೆ ಬರಲು ಆಸಕ್ತಿ ಹುಟ್ಟುವಂತೆ ಮಾಡಿದ್ದಾರೆ. ಸಂಸ್ಥೆಗೆ ನಮ್ಮ ವಂದನೆಗಳು ಎಂದಿದ್ದಾರೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles