ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ಇಂದಿಗೆ ಮೂರು ತಿಂಗಳು ಕಳೆದಿದೆ. ಸಮಾಧಿ ಬಳಿ ಅಪ್ಪು ಕುಟುಂಬಸ್ಥರು ಮೂರನೇ ತಿಂಗಳ ಪುಣ್ಯ ತಿಥಿ ಕಾರ್ಯವನ್ನು ನೆರವೇರಿಸಿದ್ದಾರೆ. ಪತಿಯ ನೆನಪಿಗಾಗಿ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ 500ಗಿಡಗಳನ್ನು ಅಭಿಮಾನಿಗಳಿಗೆ ದಾನವಾಗಿ ನೀಡಿದ್ದಾರೆ.
ಕಂಠೀರವ ಸ್ಟುಡಿಯೋದಲ್ಲಿ ಇರುವ ಅಪ್ಪು ಸಮಾಧಿಗೆ ಭೇಟಿ ಕೊಟ್ಟ ಕುಟುಂಬಸ್ಥರು ಪೂಜೆ ಮಾಡಿದ ಬಳಿಕ ಸಿಹಿ ಖಾದ್ಯ ಹಾಗೂ ಪುನೀತ್ ರಾಜ್ಕುಮಾರ್ಗೆ ಇಷ್ಟವಾದ ಪದಾರ್ಥಗಳನ್ನುಸಮಾಧಿಗೆ ಎಡೆ ಇಟ್ಟಿದ್ದಾರೆ. ನಂತರ ಅಶ್ವಿನಿ ಪುನೀತ್ ರಾಜ್ಕುಮಾರ್ ಬಾದಾಮಿ, ಸೀಬೆ, ಮಾವು ತೇಗ, ಹಲಸಿನ ಗಿಡ ಸೇರಿ 500ಗಿಡಗಳನ್ನು ಅಭಿಮಾನಿಗಳಿಗೆ ದಾನವಾಗಿ ನೀಡಿದ್ದಾರೆ.
ಪೂಜೆಯಲ್ಲಿ ರಾಘವೇಂದ್ರ ರಾಜ್ಕುಮಾರ್, ಅಪ್ಪು ಸಹೋದರಿ ಲಕ್ಷ್ಮೀ, ಎಸ್.ಎ ಗೋವಿಂದ ರಾಜು, ಅಶ್ವಿನಿ ಪುನೀತ್ ರಾಜ್ಕುಮಾರ್, ಪುತ್ರಿ ಧೃತಿ ಹಾಗೂ ಕುಟುಂಬಸ್ಥರು ಭಾಗಿಯಾಗಿದ್ದರು. ಪೂಜೆ ಕಾರ್ಯ ಮುಗಿದ ಬಳಿಕ ಅಭಿಮಾನಿಗಳಿಗೆ ಅಪ್ಪು ಸಮಾಧಿಯ ದರ್ಶನ ವ್ಯವಸ್ಥೆ ಇದ್ದು, ಅನ್ನದಾನವೂ ಕೂಡ ನಡೆಯಲಿದೆ. ಅಪ್ಪು ಸಮಾಧಿ ಎದುರು ಸ್ಕಿಲ್ ಡಿಪಾರ್ಟ್ ಮೆಂಟ್ ವತಿಯಿಂದ ಸಂಜೆ 6ಗಂಟೆಗೆ ದೀಪಗಳನ್ನ ಬೆಳಗಿಸಿ ನಮನ ಸಲ್ಲಿಸಲಿದ್ದಾರೆ.