ಬಂಟ್ವಾಳ: ಕಪ್ಪು ಕಲ್ಲಿನ ಕ್ವಾರೆ ಗುಂಡಿಗೆ ಬಿದ್ದು ಬಾಲಕ ಸಹಿತ ಇಬ್ಬರು ಸಾವನ್ನಪ್ಪಿದ ಘಟನೆ ಬಂಟ್ವಾಳದ ನರಿಕೊಂಬು ಗ್ರಾಮದ ಏಲಬೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಮೃತರನ್ನು ಸ್ಥಳೀಯ ಬೋರುಗುಡ್ಡೆ ನಿವಾಸಿ ಜಗದೀಶ್ (40) ಮತ್ತು ಇವರ ಸಂಬಂಧಿ ನಿಧೀಶ್ ನಾವೂರು (17) ಎಂದು ಗುರುತಿಸಲಾಗಿದೆ. ಇವರು ಸ್ಥಳೀಯ ಏಲಬೆಯಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಕಾಲು ಜಾರಿ ಬಿದ್ದಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ನರಿಕೊಂಬು ಗ್ರಾ.ಪಂ. ಪರವಾನಿಗೆ ಇಲ್ಲದೆ ಕಪ್ಪು ಕಲ್ಲಿನಕ್ವಾರೆ ನಡೆಯುತ್ತಿತ್ತು. ಸ್ಥಳೀಯರು ಆಕ್ಷೇಪದ ಹಿನ್ನೆಲೆಯಲ್ಲಿ ಕಳೆದ ನಾಲ್ಕೈದು ತಿಂಗಳ ಹಿಂದಷ್ಟೇ ಕ್ವಾರೆ ಸ್ಥಗಿತಗೊಂಡಿದ್ದು, ಸುತ್ತಲೂ ತಡೆ ಬೇಲಿ ಹಾಕಿರಲಿಲ್ಲ. ಈ ಅಕ್ರಮ ಕ್ವಾರೆಗೆ ತಹಶೀಲ್ದಾರ್ ಸಹಿತ ಜಿಲ್ಲಾಧಿಕಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೇರ ಹೊಣೆ. ಇದೀಗ ಘಟನಾ ಸ್ಥಳಕ್ಕೆ ಕೇವಲ ಪೊಲೀಸರು ಮಾತ್ರ ಬಂದಿದ್ದಾರೆ. ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿ ಬರುವ ತನಕ ಮೃತದೇಹ ಮುಟ್ಟಲು ಬಿಡುವುದಿಲ್ಲ. ಇಂತಹ ಬೇಜವಾಬ್ದಾರಿ ಅಧಿಕಾರಿಗಳಿಂದಾಗಿ ಇಬ್ಬರು ಅಮಾಯಕರ ಸಾವು ಉಂಟಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂಟ್ವಾಳ: ಕಪ್ಪು ಕಲ್ಲಿನ ಕ್ವಾರೆಗೆ ಬಿದ್ದು ಇಬ್ಬರು ಸಾವು
Subscribe
Login
0 Comments