ಭಟ್ಕಳ: ಬಂದರಿನಲ್ಲಿ ಲಂಗರು ಹಾಕಿದ್ದ ನಾಲ್ಕು ಬೋಟುಗಳು ಪಲ್ಟಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮೀನುಗಾರಿಕಾ ಬಂದರಿನಲ್ಲಿ ನಡೆದಿದೆ.
ದುರ್ಗಾಂಬಿಕಾ ದೇವಿ, ಶ್ರೀ ನಿತ್ಯಾನಂದ, ಜೈನ ಜಟಕಾ, ಗಗನ ಎಂಬ ಹೆಸರಿನ ಬೋಟುಗಳು ಪಲ್ಟಿಯಾಗಿ ನೀರು ತುಂಬಿದ್ದು, ಯಾಂತ್ರಿಕ ದೋಣಿಗಳಿಗೂ ಹಾನಿಯುಂಟಾಗಿದೆ. ಬಂದರಿನಲ್ಲಿ ಹೂಳು ತುಂಬಿದ್ದ ಕಾರಣ ಬೋಟ್ಗಳು ಮುಳುಗಡೆಯಾಗಿದೆ. ಸರ್ಕಾರ ಪ್ರತಿ ಬಾರಿ ಬಜೆಟ್ನಲ್ಲಿ ಹಣ ಬಿಡುಗಡೆ ಮಾಡಿದ್ದರೂ ಸಹ ಕಳೆದ ನಾಲ್ಕೈದು ವರ್ಷಗಳಿಂದ ಈ ಸಮಸ್ಯೆಗೆ ಪರಿಹಾರ ಸಿಗದೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಇನ್ನು ಬೋಟ್ಗಳ ಮುಳುಗಡೆಯಿಂದ ಭಾರೀ ನಷ್ಟ ಉಂಟಾಗಿದ್ದು, ಸರ್ಕಾರ ಕೂಡಲೇ ಹೂಳೆತ್ತುವ ಕೆಲಸ ಮಾಡಬೇಕೆಂದು ಸ್ಥಳೀಯ ಮೀನುಗಾರರು ಒತ್ತಾಯಿಸಿದ್ದಾರೆ.