ಬ್ರಹ್ಮಾವರ: ತಾಲೂಕಿನ ಬೈಕಾಡಿಯಲ್ಲಿ “ಅಸ್ಪೃಶ್ಯತೆ ನಿವಾರಣೆ ಕುರಿತು ಅರಿವು” ಬಗೆಗಿನ ಬೀದಿ ನಾಟಕವನ್ನು ಶನಿವಾರ ಮತ್ತು ಭಾನುವಾರ ಪ್ರದರ್ಶಿಸಲಾಯಿತು.
“ಮಂದಾರ”(ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಮತ್ತು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ವಿಶೇಷ ಘಟಕ ಯೋಜನೆಯಡಿ “ಸಾಮಾಜಿಕ ಅರಿವು” ಕಾರ್ಯಕ್ರಮದಲ್ಲಿ “ಅಸ್ಪೃಶ್ಯತೆ ನಿವಾರಣೆ ಕುರಿತು ಅರಿವು” ಬಗೆಗಿನ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು.


ಶನಿವಾರ ಮತ್ತು ಭಾನುವಾರ ಉಪ್ಪಿನಕೋಟೆ, ಸಾಲಿಗ್ರಾಮ, ಕೋಟೇಶ್ವರ, ಕುಂದಾಪುರ ಬ್ರಹ್ಮಾವರದಲ್ಲಿ ನಾಟಕಗಳನ್ನು ಪ್ರದರ್ಶಿಸಲಾಯಿತು. ಈ ಕಾರ್ಯಕ್ರಮಕ್ಕೆ ಸ್ಥಳೀಯರು, ಪ್ರಮುಖರು ಸಹಕರಿಸಿ ಪ್ರೋತ್ಸಾಹಿಸಿದರು.