ಬ್ರಹ್ಮಾವರ: ಉಕ್ರೇನ್ನ ಖಾರ್ಕೀವ್ನಿಂದ ಶುಕ್ರವಾರ ಹೊಸದಿಲ್ಲಿಗೆ ಆಗಮಿಸಿದ್ದ ವಿದ್ಯಾರ್ಥಿ ರೋಹನ್ ಶನಿವಾರ ಬ್ರಹ್ಮಾವರದಲ್ಲಿರುವ ತಮ್ಮ ಮನೆ ತಲುಪಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರೋಹನ್, ನಾವು ಹೊರಡುವುದು ನಿಧಾನ ಮಾಡಿದಷ್ಟು ತೊಂದರೆ ಹೆಚ್ಚಾಗುತ್ತದೆ ಎಂದು ಮಾ.1ರಂದು ಉಕ್ರೇನ್ನಿಂದ ಹೊರಡಲು ನಿರ್ಧರಿಸಿದೆವು. ಉಕ್ರೇನ್ನಿಂದ ಹೊರಡುವಾಗ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಿದೆವು. ರಿಸ್ಕ್ ತೆಗೆದುಕೊಂಡೇ ಹಾಸ್ಟೆಲ್ ಬಿಟ್ಟೆವು. ನೀರು, ಊಟಕ್ಕೆ ಸಾಕಷ್ಟು ತೊಂದರೆಯಾಯಿತು. ರೈಲಿನಲ್ಲಿ 20 ಗಂಟೆಗಳ ಕಾಲ ನಿಂತುಕೊಂಡೇ ಪ್ರಯಾಣಿಸಿದೆವು ಎಂದರು.