ಕಾರ್ಕಳ: ಪ್ರಾಮಾಣಿಕತೆ, ದಕ್ಷತೆ, ವಿಶ್ವಾಸಾರ್ಹತೆ, ಕ್ರಿಯಾಶೀಲತೆ ಹೊಂದಿದ್ದ ಬಂಟ ಸಮುದಾಯವು ನಾಡಿನ ಸಂಸ್ಕೃತಿ ಇದ್ದಂತೆ. ಸಂಸ್ಕೃತಿಯಿ0ದಾಗಿ ಸಮಾಜದಲ್ಲಿ ಉತ್ಸವಗಳು ಮೂಡುವುದರೊಂದಿಗೆ ಎಲ್ಲರನ್ನೂ ಒಗ್ಗಟ್ಟಾಗಿಸಲು ಸಾಧ್ಯವಾಗುತ್ತದೆ ಎಂದು ಕೇಮಾರು ಶ್ರೀ ಸಾಂದೀಪನಿ ಸಾಧನಾಶ್ರಮದ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಕುಕ್ಕಂದೂರು ಜೋಡುರಸ್ತೆಯ ಪ್ರೈಮ್ ಮಾಲ್ನ ಒಂದನೆ ಮಹಡಿಯಲ್ಲಿ ಪ್ರಾರಂಭಿಸಲಾದ ಬಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಾಗಿ ಮಾತನಾಡಿದ ಅವರು, ಬಂಟ ಸಮುದಾಯ ಒಂದು ಜಾತಿಗೆ ಸೀಮಿತ ಅಲ್ಲ, ಅದೊಂದು ಸಂಸ್ಕೃತಿ. ನಾವು ಅದನ್ನು ಉಳಿಸಿಕೊಂಡು ಹೋಗಬೇಕು ಎಂದರು. ಇಂತಹ ಸಂಸ್ಥೆಗಳನ್ನು ತೆರೆಯುವುದರ ಮುಖಾಂತರ ಜನರಿಗೆ ಕೆಲಸ ನೀಡುವುದರೊಂದಿಗೆ ಬಡವರ ಕಣ್ಣಿರನ್ನು ದೂರವಾಗಿಸೋಣ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡ ಉದಯ ಶೆಟ್ಟಿ ಮುನಿಯಾಲು ಮಾತನಾಡಿ, ಈ ಸೊಸೈಟಿಯು ಹೊಸ ಆಶಯವನ್ನು ಹುಟ್ಟು ಹಾಕುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇವೆ ನೀಡಲು ಸಿದ್ಧವಾಗಿದೆ. ಹಣ ಹೂಡಿಕೆ, ಸಾಲ ಸೌಲಭ್ಯಗಳ ವ್ಯವಹಾರವನ್ನು ಸದುಪಯೋಗ ಪಡಿಸುವಂತೆ ಕೋರಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಅಶೋಕ್ ಅಡ್ಯಂತಾಯ, ಕರ್ನಾಟಕ ಗೇರು ಬೀಜ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಕರ್ನಾಟಕ ರಾಜ್ಯ ಸೌಹಾರ್ದ ಮಹಾಮಂಡಲದ ನಿರ್ದೇಶಕ ಬೋಳ ಸದಾಶೀವ ಶೆಟ್ಟಿ, ಕಾರ್ಕಳ ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸವಿತಾ ವಿಜಯ ಶೆಟ್ಟಿ, ಸಾಣೂರು ಬಂಟರ ಸಂಘದ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಬಜಗೋಳಿ ಬಂಟರ ಸಂಘದ ಅಧ್ಯಕ್ಷ ಶ್ಯಾಮ ಶೆಟ್ಟಿ, ಕುಕ್ಕಂದೂರು ಬಂಟರ ಸಂಘದ ಅಧ್ಯಕ್ಷ ಭರತ್ ಶೆಟ್ಟಿ, ಉದ್ಯಮಿಗಳಾದ ಗುರ್ಮೆ ಸುರೇಶ್ ಶೆಟ್ಟಿ, ಶೋಧನ್ ಕುಮಾರ್ ಶೆಟ್ಟಿ, ಕೆ. ಚಂದ್ರಶೇಖರ್ ಮಾಡ, ಯತಿರಾಜ್ ಶೆಟ್ಟಿ, ವಕೀಲ ಸುನೀಲ್ ಕುಮಾರ್ ಶೆಟ್ಟಿ, ಕೃಷಿಕ ಜಗದೀಶ ಹೆಗ್ಡೆ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನಿರ್ದೇಶಕರಾದ ಸುಹಾಸ್ ಕುಮಾರ್ ಹೆಗ್ಡೆ, ಜಾರ್ಕಳ ಸುಧೀರ್ ಹೆಗ್ಡೆ, ಸುರೇಂದ್ರ ಶೆಟ್ಟಿ, ಪ್ರಶಾಂತ ಶೆಟ್ಟಿ, ಕೆ.ನವೀನ್ ಚಂದ್ರ ಶೆಟ್ಟಿ, ರಮೇಶ್ ಶೆಟ್ಟಿ, ರಾಮಲೇಖ. ಎನ್, ರೈ, ಸುಧಾಕರ್ ಶೆಟ್ಟಿ, ಸಚೀಂದ್ರ ಶೆಟ್ಟಿ, ಎಂ. ಪ್ರಸನ್ನ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ, ಸುನೀತಾ ಸಿರಿಯಣ್ಣ ಶೆಟ್ಟಿ, ವಿನಯ ಅರುಣ್ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಶೋರ್ ಶೆಟ್ಟಿ ಉಪಸ್ಥಿತರಿದ್ದರು.
ಸಭೆಯಲ್ಲಿ ವಂದನಾ ರೈ ಪ್ರಾರ್ಥಿಸಿದರು, ಸೊಸೈಟಿಯ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಸ್ವಾಗತಿಸಿದರು. ಉಪಾಧ್ಯಕ್ಷ ಕೆ.ಮಂಜುನಾಥ ಶೆಟ್ಟಿ ಬೈಲೂರು ಪ್ರಾಸ್ತವಿಕವಾಗಿ ಮಾತನಾಡಿದರು. ಸಾಯಿನಾಥ ಶೆಟ್ಟಿ ಮುಂಡ್ಕೂರು ನಿರೂಪಿಸಿದರು. ಪ್ರದೀಪ ಶೆಟ್ಟಿ ಇನ್ನ ವಂದಿಸಿದರು.