ಕಾರ್ಕಳ: ಕರಾವಳಿಯಲ್ಲಿ ಗೋಕಳ್ಳತನ ವ್ಯಾಪಕವಾಗಿ ನಡೆಯುತ್ತಿದ್ದು, ಐಷಾರಾಮಿ ಕಾರುಗಳಲ್ಲಿ ಗೋಕಳ್ಳತನ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದೀಗ ಕಾರ್ಕಳ ತಾಲೂಕಿನ ಬಂಗ್ಲೆಗುಡ್ಡೆ ಶ್ರೀ ವಿದ್ಯಾಸರಸ್ವತಿ ಮಂದಿರದ ಬಳಿ ಶನಿವಾರ ನಸುಕಿನ ಜಾವ ಗೋಕಳ್ಳತನ ನಡೆದಿದ್ದು, ಗೋಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಸುಕಿನ ಜಾವ ಕಾರೊಂದರಲ್ಲಿ ಬಂದ ಮೂವರು ದುಷ್ಕರ್ಮಿಗಳು ದನವೊಂದನ್ನು ಹಿಡಿದು ಕದ್ದೊಯ್ದಿದ್ದಾರೆ. ದನವನ್ನು ಎಳೆದು ಕಾರಿಗೆ ತುಂಬಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗೋ ಕಳ್ಳರನ್ನು ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಕಾರ್ಕಳದ ವಿ.ಹಿಂ.ಪ- ಬಜರಂಗದಳ ಆಗ್ರಹಿಸಿದೆ.
ಕಾರ್ಕಳದಲ್ಲಿ ಗೋಕಳ್ಳತನ; ದುಷ್ಕರ್ಮಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆ
Subscribe
Login
0 Comments