ಮೂಡುಬಿದರೆ: ಕಾಲೇಜು ವಿದ್ಯಾರ್ಥಿಗಳ ಬೈಕೊಂದು ಸ್ಕೂಟಿಗೆ ಢಿಕ್ಕಿ ಹೊಡೆದ ಪರಿಣಾಮ ಕೂಲಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಮೂಡುಬಿದಿರೆ ತಾಲೂಕಿನ ಗಂಟಾಲ್ ಕಟ್ಟೆಯಲ್ಲಿ ಮಂಗಳವಾರ ನಡೆದಿದೆ.
ಮೃತರನ್ನು ಮೂಡುಬಿದಿರೆ ಶಿರ್ತಾಡಿಯ ಅರ್ಜುನಾಪುರ ಸಮೀಪದ ಪುಣ್ಕೆದಡಿ ನಿವಾಸಿ ರಮೇಶ್ ಪೂಜಾರಿ ಎಂದು ಗುರುತಿಸಲಾಗಿದೆ. ರಮೇಶ್ ಅವರು ಗಂಟಾಲ್ ಕಟ್ಟೆಯ ಮಿನೇಜಸ್ ಅವರ ಮನೆಗೆ ಮರದ ಕೆಲಸಕ್ಕೆ ಬರುತ್ತಿದ್ದರು. ಚಹಾ ಕುಡಿಯಲೆಂದು ಕ್ಯಾಂಟೀನ್ಗೆ ಹೋಗಿ ವಾಪಾಸ್ ಬರಲು ರಸ್ತೆ ದಾಟುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ವೇಣೂರು ಕಡೆಯಿಂದ ಬರುತ್ತಿದ್ದ ಬೈಕ್ ಢಿಕ್ಕಿ ಹೊಡೆದಿದ್ದು, ಆಗ ರಸ್ತೆಗೆ ಎಸೆಯಲ್ಪಟ್ಟ ರಮೇಶ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾಲೇಜು ವಿದ್ಯಾರ್ಥಿಗಳ ಅತೀ ವೇಗದ ಚಾಲನೆ ಹಾಗೂ ರಮೇಶ್ ಅವರು ಬೈಕ್ ಬರುತ್ತಿರುವುದನ್ನು ಗಮನಿಸಿದೆ ಸ್ಕೂಟಿಯನ್ನು ರಸ್ತೆಯಾಚೆಗೆ ತಂದಿರುವುದು ಘಟನೆಗೆ ಕಾರಣವಾಗಿದೆ. ಘಟನಾ ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.