ಕಾರ್ಕಳ ನೆಕ್ಲಾಜೆ ಶ್ರೀ ಕಾಳಿಕಾಂಬ ದೇವಸ್ಥಾನಕ್ಕೆ ಭೇಟಿ ಕೊಟ್ಟ ಕಾಂಗ್ರೆಸ್ ಅಭ್ಯರ್ಥಿ ಉದಯ್ ಶೆಟ್ಟಿ ಮುನಿಯಾಲ್ ಶ್ರೀ ದೇವಿಗೆ ಪೂಜೆ ಸಲ್ಲಿಸಿದರು ದೇವಸ್ಥಾನದ ಪ್ರದಾನ ಅರ್ಚಕರಾದ ವಿಠಲ್ ಪೂರೋಹಿತ್ ಪ್ರಾರ್ಥಿಸಿ ದೇವರ ಪ್ರಸಾದ ವಿತರಿಸಿದರು, ದೇವಸ್ಥಾನದ ಆಡಳಿತ ಮೊಕ್ತೇಸರಾದ ಶಿಲ್ಪಿ ರಾಮಚಂದ್ರ ಆಚಾರ್ಯ ಶಾಲು ಮತ್ತು ಫಲವಸ್ತು ನೀಡಿ ಗೌರವಿಸಿದರು.
ಈ ಸಂದರ್ಬದಲ್ಲಿ ಜೊತೆ ಮೊಕ್ತೇಸರರುಗಳಾದ ರವಿ ಆಚಾರ್ಯ, ಸುರೇಶ್ ಆಚಾರ್ಯ, ಮಾಜಿ ಮೊಕ್ತೇಸರ್ ಜಯರಾಮ್ ಆಚಾರ್ಯ ಪುರಸಭಾ ಸದಸ್ಯೆ ನಳಿನಿ ಆಚಾರ್ಯ, ಕಾಬೆಟ್ಟು ಸದಾನಂದ ಆಚಾರ್ಯ, ವಿಜೇಂದ್ರ ಆಚಾರ್ಯ ಕಿಶೋರ್ ಆಚಾರ್ಯ, ಹೇಮಂತ್, ಪ್ರಸಾದ್ ಮತ್ತು ಸಮಾಜ ಭಾಂದವರು ಉಪಸ್ಥಿತಿತರಿದ್ದರು.