ಮಂಗಳೂರು: ಕರಾವಳಿಯಲ್ಲಿ ಧಾರ್ಮಿಕ ಕ್ಷೇತ್ರಕಷ್ಟೇ ಮೀಸಲಾಗಿದ್ದ ವ್ಯಾಪಾರ ಬ್ಯಾನ್ ವಿವಾದ ಇದೀಗ
ಸಾರ್ವತ್ರಿಕ ವ್ಯಾಪಾರಕ್ಕೂ ಹಬ್ಬಿದೆ.
ದ.ಕ. ಜಿಲ್ಲೆ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿರುವ ಹೋಟೆಲ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೋಟೆಲ್ಗೆ ಹಿಂದುಗಳ ಹೆಸರು ಇಟ್ಟುಕೊಂಡು ಮುಸ್ಲಿಮರು ವ್ಯಾಪಾರ ಮಾಡುತ್ತಿದ್ದಾರೆ. ಇನ್ನು ಮುಂದೆ ಈ ಹೋಟೆಲ್ಗೆ ಯಾವುದೇ ಹಿಂದೂಗಳು ಹೋಗಬೇಡಿ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಜಾಗೋ ಕಲ್ಲಡ್ಕ ಜಾಗೋ’ ಎಂದು ಬಹಿಷ್ಕಾರ ಕ್ಯಾಂಪೇನ್ ಆರಂಭವಾಗಿದೆ.