ದೆಹಲಿ: ಬಹುದೊಡ್ಡ ಅಗ್ನಿ ದುರಂತಕ್ಕೆ 60 ಗುಡಿಸಲು ಬೆಂಕಿಗೆ ಆಹುತಿಗೆ ಆಗಿ ಏಳು ಮಂದಿ ಮೃತಪಟ್ಟ ಘಟನೆ ದೆಹಲಿಯ ಗೋಕಲ್ಪುರಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ನಿನ್ನೆ ತಡರಾತ್ರಿ 1ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 60 ಗುಡಿಸಲುಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ದೆಹಲಿ ಅಗ್ನಿಶಾಮಕ ದಳ ತಿಳಿಸಿದೆ. ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳ ಸುಮಾರು 13 ಟೆಂಡರ್ಗಳು ಯಶಸ್ವಿಯಾಗಿದೆ.
ಬೆಂಕಿಯು ವೇಗವಾಗಿ ಹರಡುತ್ತಿದ್ದ ಕಾರಣ ಬೆಂಕಿ ನಂದಿಸಿ, ಪರಿಸ್ಥಿಯನ್ನು ನಿಯಂತ್ರಣ ತರುವಷ್ಟರಲ್ಲಿ ಇಂದು ಮುಂಜಾನೆ 4ಗಂಟೆಯಾಗಿತ್ತು. ಬೆಂಕಿ ತಗುಲಲು ಕಾರಣ ತಿಳಿದುಬಂದಿಲ್ಲ. ತನಿಖೆ ಪ್ರಾರಂಭ ಮಾಡಿದ್ದೇವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೆಹಲಿ ಈಶಾನ್ಯ ವಲಯ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ದೇವೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.