ಮಂಗಳೂರು:ಕೋವಿಡ್ ಕಾರಣಕ್ಕೆ ವಿಧಿಸಲಾಗಿದ್ದ ನೈಟ್, ವೀಕೆಂಡ್ ಕರ್ಫ್ಯೂ ರದ್ದುಗೊಳಿಸಲಾಗಿರುವ ಹಿನ್ನೆಲೆ ಸ್ಥಗಿತಗೊಂಡಿದ್ದ ಕಂಬಳ ಕೂಟಗಳು ಈಗ ಪುನರಾರಂಭಗೊಳ್ಳಲಿದೆ.
ವಾರತ್ಯಂದಲ್ಲಿ ನಡೆಯಬೇಕಿದ್ದ ಕಂಬಳಕೂಟವನ್ನು ಕರ್ಫ್ಯೂ ಕಾರಣಕ್ಕೆ ನಿಲ್ಲಿಸಲಾಗಿತ್ತು. ಇದೀಗ ಕರ್ಫ್ಯೂವನ್ನು ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ಫೆಬ್ರವರಿ 5ರಂದು ಕಾಂತಾವರ ಬಾರಾಡಿ ಬಿಡು ಸೂರ್ಯಚಂದ್ರ ಜೋಡುಕೆರೆ ಕಂಬಳದೊಂದಿಗೆ ಮತ್ತೆ ಕಂಬಳ ಕೂಟ ಆರಂಭವಾಗಲಿದೆ.