ಉಡುಪಿ: ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳಲ್ಲಿ ಜಿಲ್ಲಾಧಿಕರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವೂ ಒಂದಾಗಿದೆ. ಜನರ ಸಮಸ್ಯೆಯನ್ನು ಹತ್ತಿರದಿಂದ ಆಲಿಸಿ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಎಲ್ಲಾ ಅಧಿಕಾರಿ ವರ್ಗದವರು ಇಲ್ಲಿ ಬಂದಂತಹ ಅರ್ಜಿಯನ್ನು ಸೂಕ್ತವಾಗಿ ಪರಿಶೀಲಿಸಿ ನ್ಯಾಯ ಒದಗಿಸುವುದು ಕರ್ತವ್ಯವೆಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಹೇಳಿದರು.
ಅವರು ವರಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುನಿಯಾಲು ವೆಂಕಟರಮಣ ದೇವಾಲಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿ, ಬಂದಂತಹ ಅಹವಾಲುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.
ಗ್ರಾಮ ವಾಸ್ತವ್ಯದಲ್ಲಿ ಕೈಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಂಚಾಯತ್ ರಾಜ್, ಕಂದಾಯ, ಅರಣ್ಯ, ಲೋಕೋಪಯೋಗಿ, ಸಣ್ಣ ನೀರಾವರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೆಸ್ಕಾಂ, ಪಿಡಬ್ಲ್ಯೂಡಿ ಇಂಜಿನಿಯರಿಂಗ್ ಹಾಗೂ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಅಹವಾಲುಗಳು ಬಂದಿದ್ದವು.
ಗ್ರಾಮ ವಾಸ್ತವ್ಯಕ್ಕೆ ಒಟ್ಟು 143 ಅಹವಾಲುಗಳು ಬಂದಿದ್ದು ರಸ್ತೆ ನಿರ್ಮಾಣ, ಹಕ್ಕು ಪತ್ರ, ನೆಟ್ವರ್ಕ್, ಸಾರಿಗೆ ಸಂಪರ್ಕ, ಸೇತುವೆ ನಿರ್ಮಾಣ, ಡೀಮ್ಡ್ ಫಾರೆಸ್ಟ್, ವರಂಗ ಮಠದಿಂದ ಅಭಿವೃದ್ಧಿಗೆ ತೊಡಕಾಗುವ ಹಾಗೂ ಅರಣ್ಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳ ಆಗಿದ್ದವು.
ಇದೇ ವೇಳೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವರಂಗ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಹೆಬ್ಬಾರ್, ಇದೊಂದು ವಿನೂತನವಾದ ಕಾರ್ಯಕ್ರಮವಾಗಿದ್ದು, ನಮ್ಮ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿರುವುದಕ್ಕೆ ಅಭಿನಂದನೆ. ಎಲ್ಲ ಅರ್ಜಿಗಳ ವಿಲೇವಾರಿ ಆಗಿ ಜನಸಾಮಾನ್ಯರಿಗೆ ಪ್ರಯೋಜನವಾಗಲಿ ಎಂದರು.
ಮೆಸ್ಕಾಂ ನಿರ್ದೇಶಕ ದಿನೇಶ್ ಪೈ ಅಭಿಪ್ರಾಯ ವ್ಯಕ್ತಪಡಿಸಿ, ವರಂಗದಲ್ಲಿ ಎಲ್ಲಾ ಅಭಿವೃದ್ಧಿಗೆ ವರಂಗ ಮಠ ತೊಡಕಾಗುತ್ತಿದೆ. ಮುಟ್ಲುಪಾಡಿಯಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ವಿದ್ಯಾರ್ಥಿಗಳು ಹಾಗೂ ವರ್ಕ್ ಫ್ರಂ ಹೋಮ್ ನಡೆಸುತ್ತಿರುವವರಿಗೆ ಸಮಸ್ಯೆಯಾಗುತ್ತಿದೆ. ಈ ಭಾಗದಲ್ಲಿ ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದ ಅನೇಕ ಜನ ಹಕ್ಕು ಪತ್ರ ಪಡೆಯದೆ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಪ್ರಸನ್ನ, ಎಡಿಸಿ ವೀಣಾ, ಡಿಸಿಎಫ್ ಗಣಪತಿ, ಡಿಸಿಎಫ್ ಆಶಿಶ್ ರೆಡ್ಡಿ, ಎಸಿಎಫ್ ಕಾಜಲ್, ತಹಸೀಲ್ದಾರ್ ಪುರಂದರ, ಇಒ ಶಶಿಧರ್ ವಿವಿಧ ಇಲಾಖೆಯ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಅಂಡಾರಿಗೆ ಬೇಕಾಗಿದೆ ಸಾರಿಗೆ ಸಂಪರ್ಕ.
ಅAಡಾರಿನಿAದ ಹೆಬ್ರಿ ಬರಲು ಎರಡು ಬಸು ಬದಲಿಸಿ ಬರಬೇಕು. ಹೆಬ್ರಿಯ ಕಾಲೇಜ್ ಗಳಿಗೆ ಅನೇಕ ವಿದ್ಯಾರ್ಥಿಗಳು ಬರುವುದರಿಂದ ಬೆಳಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ಬಸ್ ವ್ಯವಸ್ಥೆಯನ್ನು ಕಲ್ಪಿಸಲು ಉದ್ಯಮಿ ಗೋಪಿನಾಥ್ ಭಟ್ ಜಿಲ್ಲಾಧಿಕಾರಿ ಅವರ ಬಳಿ ಕೇಳಿಕೊಂಡರು. ಅಜೆಕಾರ್, ಅಂಡಾರ್, ಹೆಬ್ರಿ ಮಾರ್ಗವಾಗಿ ಖಾಸಗಿ ಬಸ್ ಚಲಾಯಿಸಿದರು ಸಮಸ್ಯೆ ಬಗೆಹರಿಯುತ್ತದೆ ಎಂದರು. ಅದಕ್ಕೆ ಜಿಲ್ಲಾಧಿಕಾರಿಯವರು ತಹಶೀಲ್ದಾರ್ ಪುರಂದರ್ ಅವರಿಗೆ ಸೂಚಿಸಿ ಸೂಕ್ತ ಪರಿಹಾರ ಒದಗಿಸಲು ಸೂಚಿಸಿದರು.
ಶಿಥಿಲಾವಸ್ಥೆಯಲ್ಲಿರುವ ಪದ್ಮಾಂಬಿಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯನ್ನು ದುರಸ್ತಿಗೊಳಿಸಿ ಸರ್ಕಾರಕ್ಕೆ ದತ್ತು ಪಡೆಯಲು ಸ್ಥಳೀಯರಾದ ಮಹಾಬಲ ಪೂಜಾರಿ ಕೇಳಿಕೊಂಡರು. ಮುನಿಯಾಲು ಕೆಪಿಎಸ್ಸಿ ಶಾಲೆಯ ಪ್ರಾಥಮಿಕ ವಿಭಾಗದ ಕಟ್ಟಡವು ಶೀತಲ ವ್ಯವಸ್ಥೆಗೆ ಹೋಗಿದ್ದು ಮಕ್ಕಳ ಮೇಲೆ ಬೀಳುವ ಸಾಧ್ಯತೆಗಳಿವೆ. ಸಮರ್ಪಕವಾಗಿ ರಿಪೇರಿ ಮಾಡಲು ಜಿಲ್ಲಾಧಿಕಾರಿ ಸೂಚಿಸಿದರು. ಸಾಧ್ಯವಾಗದಿದ್ದಲ್ಲಿ ಪಕ್ಕದ ಬಿಲ್ಡಿಂಗ್ ಸ್ಥಳಾಂತರಿಸಲು ಸೂಚನೆ ನೀಡಿ, ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಶಾಲೆ ಆರಂಭವಾಗುವ ಮೊದಲೇ ಯಾವುದೇ ರೀತಿಯ ಕರ್ತವ್ಯಗಳು ಬಾಕಿ ಇದ್ದಾರೆ ಅಧಿಕಾರಿಗಳು ಮೊದಲೇ ಮಾಡಿಕೊಡಬೇಕು ಎಂದು ಕೂರ್ಮಾರಾವ್ ಹೇಳಿದರು.
ಎಲ್ಲಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ.
ಕೆಲವು ಅಧಿಕಾರಿಗಳು ಅಹವಾಲು ಸಂಬAಧಿಸಿದ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರ ನೀಡದ ಕಾರಣ, ಆಗಮಿಸಿರುವ ಪ್ರತಿಯೊಬ್ಬ ಅಧಿಕಾರಿ ಈ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯಾವುದಾದರೂ ಒಂದು ಸ್ಥಳವನ್ನು ಬಿಡುವಿನಲ್ಲಿ ಇಂದೇ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಲು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅವಾಗ ಮಾತ್ರ ಜನರ ಸಮಸ್ಯೆಯನ್ನು ಆಳವನ್ನು ತಿಳಿಯಲು ಸಾಧ್ಯವಾಗುತ್ತದೆ.
ವರಂಗ ಗ್ರಾಮ ಪಂಚಾಯಿತಿಯ ಮಾತಿ ಬೆಟ್ಟು, ಕಾಡುಹೊಳೆ ಹಾಗೂ ಅಂಡಾರಿನಲ್ಲಿ ೧೦ ದಿನದ ಒಳಗಾಗಿ ಜಿಲ್ಲಾ ಪಂಚಾಯತ್ ಸಿಇಒ ಸಹಾಯ ಪಡೆದು, ಪಿಡಿಒ ಹಾಗೂ ಗಣಿ ಇಲಾಖೆಯ ಅಧಿಕಾರಿಗಳು ಒಟ್ಟುಗೂಡಿ ಮರಳು ನಿಕ್ಷೇಪವನ್ನು ಪತ್ತೆಹಚ್ಚಿ ಸ್ಥಳೀಯರಿಗೆ ಅನುಕೂಲವಾಗುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಅವರ ಕಟ್ಟುನಿಟ್ಟಿನ ಸೂಚನೆ.
ಬ್ರೋಕರ್ ಸಂಬಂಧಿಸಿದಂತೆ ಅಹವಾಲು ಗ್ರಾಮ ವಾಸ್ತವ್ಯದಲ್ಲಿ ಸ್ವೀಕರಿತವಾಗಿ ತಾಲೂಕು ಕಚೇರಿ ಅಥವಾ ಯಾವುದೇ ಕಚೇರಿಗಳಲ್ಲಿ ಬ್ರೋಕರ್, ಸಾರ್ವಜನಿಕರು ಹಾಗೂ ಇಲಾಖೆ ಸಿಬ್ಬಂದಿಗಳನ್ನು ಸೇರಿ ಇಂತಹ ಬೇಜವಾಬ್ದಾರಿಯುತ ಕೆಲಸದಲ್ಲಿ ತೊಡಗಿಕೊಂಡರೆ ಅವರ ಮೇಲೆ ಯಾವುದೇ ಮುಲಾಜುಗಳಿಲ್ಲದೆ ಸೂಕ್ತ ಕ್ರಮ ಜರುಗಿಸುವುದಾಗಿ ಗ್ರಾಮ ವಾಸ್ತವ್ಯದಲ್ಲಿ ಜನರಿಗೆ ಮಾಹಿತಿ ನೀಡಿದರು.
ವರಂಗ ಜೈನ ಮಠದ ಅಧೀನದಲ್ಲಿ ಸುಮಾರು 65 ಮನೆಗಳು ಹಕ್ಕುಪತ್ರಗಳಿಲ್ಲದೆ ವಾಸ ಮಾಡುತ್ತಿವೆ. ಸುಮಾರು 40ವರ್ಷಗಳಿಂದ ಮನೆಗೆ ಯಾವುದೇ ದಾಖಲೆಗಳಿಲ್ಲದೆ ಇರುವುದರಿಂದ ಜಿಲ್ಲಾಧಿಕಾರಿ ಕೂರ್ಮರಾವ್ ಹೆಬ್ರಿ ತಹಶೀಲ್ದಾರ್ ಪುರಂದರ ಅವರು ಆ ಪ್ರದೇಶವನ್ನು ಕಂದಾಯ ಗ್ರಾಮವನ್ನಾಗಿಸಲು ಎರಡು ವಾರದೊಳಗಾಗಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
ಇನ್ನೇನು, ಮಳೆಗಾಲ ಸಮೀಪಿಸುತ್ತಿದ್ದು ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಮಳೆಗಾಲಕ್ಕೆ ಸಿದ್ಧತೆ ಮಾಡಿಕೊಂಡು ಯಾವುದೇ ರೀತಿಯ ಸಮಸ್ಯೆ ಉದ್ಭವಿಸದಂತೆ ಸೂಕ್ತ ಕ್ರಮಕೈಗೊಳ್ಳಲು ಕೂರ್ಮಾರಾವ್ ನಿರ್ದೇಶಿಸಿದರು.
ವರಂಗದ ಕಂದಾಯ ಗ್ರಾಮಕ್ಕೆ 10ದಿನದೊಳಗೆ ಪ್ರಸ್ತಾವನೆ ಸಲ್ಲಿಸಿ, ಮಾತೆ ಬೆಟ್ಟಿನಲ್ಲಿ ಸ್ಮಶಾನಕ್ಕೆ ನಿಗದಿಪಡಿಸಲಾಗಿದ್ದ ಜಾಗವನ್ನು ಒತ್ತುವರಿ ಮಾಡಿದ್ದು ಪ್ರಮಾದನಿಯ. ಸರ್ಕಾರಿ ಅಧಿಕಾರಿಗಳು ಸೂಕ್ತವಾಗಿ ಕೆಲಸ ನಡೆಸದಿದ್ದಲ್ಲಿ ಈ ರೀತಿಯ ಸಮಸ್ಯೆ ಉದ್ಭವಿಸಿದೆ ಎಂದು ಜಿಲ್ಲಾಧಿಕಾರಿ ಆಕ್ರೋಶ ವ್ಯಕ್ತಪಡಿಸಿ ಇದಕ್ಕೆ ಸಂಬAಧಿಸಿದ ಎಲ್ಲ ದಾಖಲೆಗಳನ್ನು ಕೇಳಿದರು.
ಅಭಿವೃದ್ಧಿಗೆ ಅಡ್ಡಿಯಾಗುತ್ತಿರುವ ಜೈನ ಮಠ.
ಪೈಪ್ ಲೈನ್ ಅಳವಡಿಕೆ, ಕೊಳವೆ ಬಾವಿ ನಿರ್ಮಾಣ, ಜೆಸಿಬಿ ಕೆಲಸ, ರಸ್ತೆ ನಿರ್ಮಾಣ ಇಂತಹ ಎಲ್ಲಾ ಕೆಲಸಗಳಿಗೆ ವರಂಗದ ಜೈನಮಠ ಅಭಿವೃದ್ಧಿಗಾಗಿ ಅಡ್ಡಿಯಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅವರ ಬಳಿ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು
ಮುನಿಯಾಲು ಗಾಂಧಿ ಮೈದಾನ ಕೊರಗರ ಕಾಲೋನಿಗೆ ಭೇಟಿ.
ಕೊರಗರ ಕಾಲೋನಿಗೆ ಭೇಟಿ ನೀಡಿ ಅವರ ಸಮಸ್ಯೆ ಆಲಿಸಿ, ಪಡಿತರ ಚೀಟಿಯಲ್ಲಿ ನೀಡಿದ ಆಹಾರ ಸಾಮಗ್ರಿಗಳನ್ನು ಪರಿಶೀಲಿಸಿ, ಕಾಲೋನಿಯ ಬಾವಿಯನ್ನು ವೀಕ್ಷಿಸಿದರು. ಕಾಲೋನಿಗೆ ಪಡಿತರ ದೂರದ ಮುಟ್ಲುಪಾಡಿಯಲ್ಲಿ ನೀಡುತ್ತಿರುವುದರ ನ್ನು ಗಮನಿಸಿ ಸಂಬAಧಪಟ್ಟವರಿಗೆ ಮುನಿಯಾಲಿನಲ್ಲಿ ನೀಡಲು ಸೂಚಿಸಿ, ಆಹಾರ ಸಾಮಗ್ರಿಗಳ ಪ್ಯಾಕಿಂಗ್ ಹಾಗೂ ಗುಣಮಟ್ಟ ಅಳೆಯಲು ಸಂಬಂಧಪಟ್ಟವರನ್ನು ಕಚೇರಿಗೆ ಕರೆದರು.
ಮುಟ್ಲುಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭೇಟಿ ನೀಡಿ ಪರಿಶೀಲನೆ.
ಒಂದರಿAದ ಏಳನೇ ತರಗತಿ ತನಕ ಸುಮಾರು 27 ವಿದ್ಯಾರ್ಥಿಗಳಿದ್ದು ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಇಲಾಖಾ ಅಧಿಕಾರಿಗಳಲ್ಲಿ ಪ್ರಶ್ನಿಸಿ, ಶಿಕ್ಷಕರು ಸರ್ಕಾರಿ ಶಾಲೆಗೆ ದಾಖಲು ಹೊಂದಲು ಪ್ರಯತ್ನಿಸಿ ಎಂದು, ಕೊನೆಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಬೈದಡ್ಕ ರಸ್ತೆಯ ಪರಿಶೀಲನೆ.
ವರಂಗ ಮಠದವರು ರಸ್ತೆಯ ಅಭಿವೃದ್ಧಿಗೆ ಸಹಕರಿಸುತ್ತಿಲ್ಲ ಎಂದಾಗ ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ ವರಂಗ ಮಠದ ವರಿಂದ ಮಾಹಿತಿ ಪಡೆದರು.
ಸಂಜೀವಿನಿ ಗೋದಾಮ ಕ್ಕೆ ಭೇಟಿ
ಮುನಿಯಾಲು ಸಂಜೀವಿನಿ ಗೋ ಧಾಮಕ್ಕೆ ಭೇಟಿ ನೀಡಿ ಹಸುಗಳ ಬಗ್ಗೆ ಮಾಹಿತಿ ಪಡೆದು ಮಧ್ಯಾಹ್ನದ ಭೋಜನ ಸೇವಿಸಿ ಸಭಾಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೂರ್ಮರಾವ್
ಭಾಗವಹಿಸಿದರು.
ನಂತರದಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಪಡುಕುಡೂರು ಸಾರ್ವಜನಿಕ ರುದ್ರಭೂಮಿಗೆ ಭೇಟಿ ನೀಡಿ, ಪಡುಕುಡೂರು ಪರಿಶಿಷ್ಟರ ಕಾಲೋನಿಗೆ ಭೇಟಿ ನೀಡಿಸಮಾಲೋಚನೆ ನಡೆಸಿದರು.
ಜಿಲ್ಲಾಧಿಕಾರಿ ಕೂರ್ಮರಾವ್ ಪಡುಕುಡೂರು ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಹೊಂದಿ, ಸಂಜೆ ವಿವಿಧ ಮಕ್ಕಳು ಹಾಗೂ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಜಿಲ್ಲಾಧಿಕಾರಿ ಕೂರ್ಮಾರಾವ್ ಅವರು ಮುನಿಯಾಲು ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರು ಅವರನ್ನು ಗೌರವಿಸಿದರು. ಎಲ್ಲಾ ಅಧಿಕಾರಿ ಮಿತ್ರರು ಬಡವರ ದೀನ ದಲಿತರ ಪರ ತಮ್ಮ ಕೆಲಸ ಕಾರ್ಯಗಳನ್ನು ಮಾಡಬೇಕು. ಮೂಲಭೂತ ಸೌಕರ್ಯಗಳ ವಂಚಿತರಾದ ವರನ್ನು ಗುರಿಯಾಗಿಟ್ಟುಕೊಂಡು ಪ್ರಥಮ ಆದ್ಯತೆಯ ಕೆಲಸ ಮಾಡಬೇಕಾಗಿದೆ. ಪ್ರತಿಯೊಬ್ಬರು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಿದಾಗ ಯಾವುದೇ ಲೋಪದೋಷಗಳು ಕಂಡು ಬರುವುದಿಲ್ಲ ಎಂದು ಎಲ್ಲಾ ಅಧಿಕಾರಿ ಮಿತ್ರರಿಗೆ ಜಿಲ್ಲಾಧಿಕಾರಿ ಕೂರ್ಮರಾವ್ ಹೇಳಿದರು.
ಗ್ರಾಮ ವಾಸ್ತವ್ಯದಲ್ಲಿ ಸತೀಶ್ ಶೆಟ್ಟಿ ಮುಟ್ಲುಪಾಡಿ, ಸುಹಾಸ್ ಶೆಟ್ಟಿ, ಪ್ರಮೀಳಾ ಹರೀಶ್ ಪೂಜಾರಿ ಮುಟ್ಲುಪಾಡಿ, ಸುರೇಶ್ ಶೆಟ್ಟಿ, ಜ್ಯೋತಿ ಹರೀಶ್, ರತ್ನಾಕರ ಪೂಜಾರಿ ಸಲಹೆ ಸೂಚನೆ ನೀಡಿದರು.