ಮಂಗಳೂರು: ದ.ಕ. ಜಿಲ್ಲಾದ್ಯಂತ ಕೋವಿಡ್ ಹಾಗೂ ಒಮೈಕ್ರಾನ್ ಭೀತಿಯ ಹಿನ್ನೆಲೆಯಿಂದ ಕಡಲ ಕಿನಾರೆಯಲ್ಲಿ ಹೊಸ ವರ್ಷ ಆಚರಿಸಲು ಜಿಲ್ಲಾಡಳಿತವು ನಿರ್ಬಂಧ ವಿಧಿಸಿದೆ. ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಡಿಸೆಂಬರ್ 31 ರಂದು ಅಂದರೆ ಇಂದು ಸಂಜೆ ಮಂಗಳೂರು ಸುತ್ತಮುತ್ತ ಇರುವ ಬೀಚ್ ಗಳಿಗೆ 7 ಗಂಟೆಯ ಬಳಿಕ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಇಂದು ಸಂಜೆಯ ಬಳಿಕ ಮಂಗಳೂರಿನ ಪಣಂಬೂರು, ತಣ್ಣುರುಬಾವಿ, ಸೋಮೇಶ್ವರ, ಉಳ್ಳಾಲ, ಮುಕ್ಕ, ಸುರತ್ಕಲ್, ಕೆಆರ್ ಇಸಿ ಬೀಚ್ ಗಳಿಗೆ ಜಿಲ್ಲಾಡಾಳಿತ ಪ್ರವೇಶವನ್ನು ನಿರ್ಬಂಧಿಸಿದೆ. ಜಿಲ್ಲಾಡಾಳಿತದ ಆದೇಶವನ್ನು ಮೀರಿದರೆ ಕಠಿಣ ಕ್ರಮದ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದೆ.