ಉಡುಪಿ: ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಅಷ್ಟಬಂಧ ಪ್ರತಿಷ್ಠೆ, ಬ್ರಹ್ಮಕಲಶೋತ್ಸವದೊಂದಿಗೆ ಏ.2 ರಿಂದ ಏ.8ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳ ವಿವರ:
- ಏ.3 ರಂದು ಕಪಿಲ ಮಹರ್ಷಿಗಳ ಬಿಂಬ ಪ್ರತಿಷ್ಠೆ
- ಏ.6 ರಂದು ನೂತನ ಶಿಲಾಮಯ ಗರ್ಭಗುಡಿಯಲ್ಲಿ ಶ್ರೀ ಕುಬೇರ ಚಿತ್ರಲೇಖಾ ಸಹಿತ ಶ್ರೀಮಹಾಲಕ್ಷ್ಮೀ ದೇವರ ಅಷ್ಟಬಂಧ ಪ್ರತಿಷ್ಠಾ ಮಹೋತ್ಸವ, ಶ್ರೀ ದುರ್ಗಾ ಆದಿಶಕ್ತಿ ದೇವಿಗೆ ಪಂಚವಿಂಶತಿ ದ್ರವ್ಯಮಿಳಿತ ಅಷ್ಟೋತ್ತರ, ಶತಬ್ರಹ್ಮ ಕುಂಭಾಭಿಷೇಕ, ವಾರ್ಷಿಕ ರಂಗಪೂಜಾ ಮಹೋತ್ಸವ, ಬಲಿ ಉತ್ಸವ
- ಏ.7 ರಂದು ಶ್ರೀ ಕುಬೇರ ಚಿತ್ರಲೇಖಾ ಸಹಿತ ಶ್ರೀಮಹಾಲಕ್ಷ್ಮೀ ದೇವರಿಗೆ ಪಂಚವಿಂಶತಿ ದ್ರವ್ಯ ಮಿಳಿತ ಅಷ್ಟೋತ್ತರ, ಶತಬ್ರಹ್ಮ ಕುಂಭಾಭಿಷೇಕ
- ಏ.8 ರಂದು ಶ್ರೀ ಚಂಡಿಕಾಯಾಗ, ಮಹಾ ಸಂಪ್ರೋಕ್ಷಣೆ, ಮಹಾಮಂತ್ರಾಕ್ಷತೆ
ಕಾರ್ಯಕ್ರಮದಲ್ಲಿ ಧರ್ಮದರ್ಶಿಗಳಾದ ಶ್ರೀ ರಮಾನಂದ ಗುರೂಜಿ, ನಿಯೋಜಿತ ತಂತ್ರಿಗಳಾದ ವೇ|ಮೂ| ಕೃಷ್ಣಮೂರ್ತಿ ತಂತ್ರಿ, ನಿಯೋಜಿತ ಅರ್ಚಕರಾದ ಅನೀಶ್ ಆಚಾರ್ಯ, ಬಾಲಸುಬ್ರಹ್ಮಣ್ಯ ರಾವ್, ಆಡಳಿತ ಮಂಡಳಿಯ ಉಷಾ ರಮಾನಂದ ಅವರು ಭಾಗವಹಿಸಲಿದ್ದಾರೆ. ನಿರಂತರ ಅನ್ನಸಂತರ್ಪಣೆಯೊಂದಿಗೆ ಬಹು ವಿಜೃಂಭಣೆಯಿಂದ ನೆರವೇರಲಿದೆ ಎಂದು ಕ್ಷೇತ್ರ ಉಸ್ತುವಾರಿ ಕುಸುಮಾ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.