ಬೆಳ್ತಂಗಡಿ: ಅರಣ್ಯಾಧಿಕಾರಿ ಕಿರುಕುಳದಿಂದ ಪ. ವರ್ಗದ ಕೃಷಿಕ ಸಾವನ್ನಪ್ಪಿರುವುದಾಗಿ ಆರೋಪಿಸಿ ಪೊಲೀಸ್ ಠಾಣೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ದ.ಕ.ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಬುಧವಾರ ನಡೆಯಿತು.
ಬೆಳ್ತಂಗಡಿಯ ಕುವೆಟ್ಟು ಗ್ರಾಮ ನಿವಾಸಿ ರಾಮ ನಾಯ್ಕ ಮೃತ ಕೃಷಿಕ. ಅವರು ಮಂಗಳವಾರ ತೀವ್ರ ಅಸ್ವಸ್ಥಗೊಂಡು ಹೃದಯಾಘಾತದಿಂದ ಮೃತಪಟ್ಟಿದ್ದು, ಅವರ ಸಾವಿಗೆ ಅರಣ್ಯ ಸಂಚಾರಿ ದಳದ ಅಧಿಕಾರಿ ಸಂಧ್ಯಾ ಕಿರುಕುಳದಿಂದ ಮೃತಪಟ್ಟಿರುವುದಾಗಿ ಆರೋಪಿಸಿ ಅವರ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ರಾಮ ನಾಯ್ಕ್ ಅವರು ಜ.4ರಂದು ಮರ ಕಡಿದಿದ್ದು, ಈ ಹಿನ್ನಲೆ ಅರಣ್ಯ ಅಧಿಕಾರಿ ಸಂಧ್ಯಾ ಮನೆಗೆ ದಾಳಿ ನಡೆಸಿದ್ದರು. ಅವರು ರಾಮ ನಾಯ್ಕ್ಗೆ ನಿರಂತರ ಬೆದರಿಕೆ ಹಾಕಿದ್ದಲ್ಲದೇ ಪ್ರಕರಣ ಮುಗಿಸಲು 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.