ಕಾರ್ಕಳ: ಕಾರ್ಕಳ ಸಾಂತ್ರಬೆಟ್ಟು ನಾಗ ಬ್ರಹ್ಮ ದೇವರ ಹಾಗೂ ಪರಿವಾರ ದೈವಗಳ ಸನ್ನಿಧಿಯಲ್ಲಿ ನವೀಕರಣಗೊಂಡ ನೂತನ ಶಿಲಾ ಮಂಟಪದಲ್ಲಿ ನಾಗ ದೇವರ ಪುನರ್ ಪ್ರತಿಷ್ಠಾ ಹಾಗೂ ಬ್ರಹ್ಮಕುಂಭಾಭಿಷೇಕ ಕಾರ್ಯಕ್ರಮ ಫೆಬ್ರವರಿ 5 ಮತ್ತು 6ರಂದು ನಡೆಯಲಿದೆ.
ಫೆಬ್ರವರಿ 5ರಂದು ಶ್ರೀ ಅನಂತಪದ್ಮನಾಭ ದೇವರ ಸನ್ನಿದಿಯಲ್ಲಿ ಪ್ರಾರ್ಥನೆ, ಋತ್ವಿಜರ ಸ್ವಾಗತ, ಶಿಲ್ಪಿಯಿಂದ ಗೇಹ ಪ್ರತಿಗ್ರಹ, ದೇವತಾ ಪ್ರಾರ್ಥನೆ, ಉಗ್ರಾಣ ಮುಹೂರ್ತ, ಸ್ವಸ್ತಿ ಪುಣ್ಯಾಹ ವಾಚನ, ಆದ್ಯಗಣ ಯಾಗ, ಬಿಂಬ ಶುದ್ದಿ ಪ್ರಕ್ರಿಯಾ, ಶಾಂತಿ ಪ್ರಾಯಶ್ಚಿತ್ತ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ಬಿಂಬ ಶಯ್ಯಾಧಿವಾಸ, ಅಷ್ಟವಧಾನ ಸೇವೆ, ದಿಕ್ಪಾಲಕ ಬಲಿವಿಧಾನ, ಲಕ್ಷ್ಮೀ ಪೂಜೆ, ಬ್ರಹ್ಮ ಕಲಶ ಮಂಡಲ ರಚನೆ, ಮಂಡಲ ಪೂಜೆ, ಪ್ರಸಾದ ವಿತರಣೆ ಹಾಗೂ ಪ್ರಸಾದ ಭೋಜನ ನಡೆಯಲಿದೆ.
ಫೆಬ್ರವರಿ 6ರಂದು ಬೆಳಿಗ್ಗೆ ಪುಣ್ಯಾಹ ನಾಂದೀ ಸಮಾರಾಧನೆ, ಪ್ರತಿಷ್ಠೆ ಯಾಗ, ಪ್ರಧಾನ ಯಾಗ, ನಾಗ ದೇವರ ಪುನಪ್ರತಿಷ್ಠೆ, ಪುನರ್ ಪ್ರತಿಷ್ಠಾ ಕಲಶಾಭಿಷೇಕ, ಪ್ರಸನ್ನ ಪೂಜೆ, ಪಂಚಾಮೃತ ಅಭಿಷೇಕ, ಶ್ರೀ ನಾಗದೇವರ ದರ್ಶನ ನಡೆಯಲಿದೆ.
ನಂತರ ತಿಲಹೋಮ, ಕೂಷ್ಮಂಡ ಹೋಮ, ಪವಮಾನ ಸೂಕ್ತಯಾಗ, 108 ಕಲಶ ಸಹಿತ ಬ್ರಹ್ಮಕುಂಭಾಭಿಷೇಕ, ಪ್ರಸನ್ನ ಪೂಜೆ, ಆಶ್ಲೇಷ ಬಲಿದಾನ ಸೇವೆ, ದೈವಗಳಿಗೆ ಪ್ರಾರ್ಥನೆ, ನವಕ ಪ್ರಧಾನ ಹೋಮ, ಪ್ರಸನ್ನ ಪೂಜೆ, ನಾಗದೇವರಿಗೆ ಮಹಾಪೂಜೆ, ಪಲ್ಲಪೂಜೆ, ಪ್ರಸಾದ ವಿತರಣೆ ಹಾಗೂ ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ಬಳಿಕ ಭಜನೆ ಕುಣಿತ, ಯಕ್ಷಗಾನ ಕಾರ್ಯಕ್ರಮಗಳು ಜರುಗಲಿವೆ.