ಬಸ್ರೂರು: ಇಲ್ಲಿಯ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಸಾ ನಾರಾಯಣೀ ದೇವಾಲಯಕ್ಕೆ ಚಿತ್ರ ನಟ ಯಶ್ ಅವರು ಬ್ರಹ್ಮರಥೋತ್ಸವ ವೇಳೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ನಟ ಯಶ್ ಅವರನ್ನು ಆಡಳಿತ ಮಂಡಳಿಯವರು ಸ್ವಾಗತಿಸಿ, ಶಾಲು ಹೊದಿಸಿ, ದೇವಿಯ ಪ್ರಸಾದ ನೀಡಿ ಸನ್ಮಾನಿಸಿದರು. ಈ ಸಂದರ್ಭ ಆಡಳಿತ ಮಂಡಳಿಯ ಸದಸ್ಯರು, ದೇವಾಲಯದ ಅರ್ಚಕರು, ತಾಂತ್ರಿಕ ವರ್ಗದವರು ಹಾಗೂ ಮತ್ತಿತರ ಭಕ್ತಾದಿಗಳು ಉಪಸ್ಥಿತರಿದ್ದರು.