ಬಹಳ ಹಿಂದಿನ ಕಾಲದಿಂದಲೂ ಮಣ್ಣಿನ ಪಾತ್ರೆಗಳನ್ನು ಉಪಯೋಗಿಸುತ್ತಾ ಬರುತ್ತಿದ್ದೇವೆ. ಮಣ್ಣಿನ ಪಾತ್ರೆಯಲ್ಲಿನ ನೀರು ಕುಡಿಯುವುದರಿಂದ ಅನೇಕ ಪೋಷಕಾಂಶಗಳು ನಮ್ಮ ದೇಹಕ್ಕೆ ಸಿಗುತ್ತದೆ. ಮಣ್ಣಿನ ಪಾತ್ರೆಯಲ್ಲಿ ನೀವು ನೀರು ಹಾಕಿ ಇಟ್ಟರೆ ಅದು ತಣ್ಣಗೆ ಇರುತ್ತದೆ ಹಾಗೆ ನೀರಿನ ರುಚಿಯು ಹೆಚ್ಚುತ್ತದೆ. ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿ ಊಟ ಮಾಡುವುದರಿಂದ ಅಡುಗೆಯ ರುಚಿಯು ದುಪ್ಪಟ್ಟಾಗುವುದರ ಜೊತೆಗೆ ನಿಮ್ಮ ದೇಹದ ಆರೋಗ್ಯವನ್ನೂ ಹೆಚ್ಚಿಸುತ್ತದೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ಮಣ್ಣಿನ ಪಾತ್ರೆಯನ್ನು ಬಳಸುವವರೇ ಕಡಿಮೆ ಆಗಿದ್ದಾರೆ. ಇದರಿಂದ ಮಣ್ಣಿನ ಪಾತ್ರೆಗಳು ತನ್ನ ಪ್ರಾಮುಖ್ಯತೆಯನ್ನು ಕಳೆದು ಕೊಳ್ಳುತ್ತಿದೆ.
ಮಣ್ಣಿನ ಪಾತ್ರೆಯನ್ನು ಉಪಯೋಗಿಸುವುದರಿಂದ ಆಗುವ ಪ್ರಯೋಜನಗಳು:
• ದೇಹಕ್ಕೆ ಪೂರೈಕೆಯಾಗುವ ಕೊಬ್ಬಿನಾಂಶವನ್ನು ತಡೆಯುತ್ತದೆ –
ಸಾಮಾನ್ಯವಾಗಿ ಲೋಹದ ಪಾತ್ರೆಯಲ್ಲಿ ಸಾರು, ಸಾಂಬಾರು, ಪಲ್ಯ ಇತ್ಯಾದಿ ಅಡುಗೆಗಳನ್ನು ಮಾಡುವಾಗ ಹೆಚ್ಚು ಎಣ್ಣೆಯನ್ನು ಬಳಸಬೇಕಾಗುತ್ತದೆ. ಆದರೆ ಮಣ್ಣಿನ ಪಾತ್ರೆಯಲ್ಲಿ ನೀವು ಅಡುಗೆ ಮಾಡುವಾಗ ಹೆಚ್ಚು ಎಣ್ಣೆಯ ಅವಶ್ಯಕತೆ ಇರುವುದಿಲ್ಲ. ಇದರಿಂದ ದೇಹಕ್ಕೆ ಪೂರೈಕೆ ಆಗುವ ಎಣ್ಣೆಯ ಅಥವಾ ಕೊಬ್ಬಿನ ಪ್ರಮಾಣ ಕಡಿಮೆ ಆಗುತ್ತದೆ. ಕಡಿಮೆ ಇಣ್ಣೆ ಬಳಸಿ ಹೆಚ್ಚು ರುಚಿ ರುಚಿಯಾದ ಅಡುಗೆಗಳನ್ನು ತಯಾರಿಸಿಕೊಳ್ಳಬಹುದು.
• ಅಧಿಕ ಪೋಷಕಾಂಶಗಳು ದೇಹಕ್ಕೆ ಸಿಗುತ್ತದೆ –
ಮಣ್ಣಿನ ಪಾತ್ರೆಗಳನ್ನು ಉಪಯೋಗಿಸುವುದರಿಂದ ನಿಮ್ಮ ದೇಹಕ್ಕೆ ಹಲವಾರು ಪೋಷಕಾಂಶಗಳು ನೈಸರ್ಗಿಕವಾಗಿ ಸಿಗುತ್ತದೆ. ಇದರಿಂದ ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ. ಆದ್ದರಿಂದ ನೀವು ಕಾಯಿಲೆಗಳಿಗೆ ಬೇಗ ತುತ್ತಾಗುವುದಿಲ್ಲ. ಪ್ರಸ್ತುತ ಹಲವಾರು ಹೋಟೆಲ್ ಗಳಲ್ಲಿ ರೆಸ್ಟೋರೆಂಟ್ ಗಳಲ್ಲಿ ಮಣ್ಣಿನ ಮಡಿಕೆಯನ್ನು ಬಳಸುತ್ತಾರೆ. ಯಾಕೆಂದರೆ ಇದರಲ್ಲಿ ಅಡುಗೆಯ ರುಚಿಯು ದುಪ್ಪಟ್ಟಾಗಿ ಇರುವುದರಿಂದ ಜನರು ಇದನ್ನು ಇಷ್ಟಪಡುತ್ತಾರೆ.
• ಆಹಾರವನ್ನು ಬಿಸಿ ಬಿಸಿಯಾಗಿ ಇರಿಸುತ್ತದೆ –
ಸಾಮಾನ್ಯವಾಗಿ ನಾವು ತಿಂಡಿ ಅಥವಾ ಇನ್ನಾವುದೇ ಆಹಾರವನ್ನು ಹೆಚ್ಚು ಕಾಲ ಬಿಸಿಯಾಗಿ ಇರಿಸಲು ಹಾಟ್ ಬಾಕ್ಸ್ ಉಪಯೋಗಿಸುತ್ತೇವೆ. ಆದರೆ ಹೆಚ್ಚಿನ ಜನಕ್ಕೆ ತಿಳಿದಿರುವುದಿಲ್ಲ ಮಣ್ಣಿನ ಪಾತ್ರೆಯಲ್ಲಿ ಮಾಡಿದ ಅಡುಗೆಯನ್ನು ಇಡುವುದರಿಂದ ಅಡುಗೆಯು ಹೆಚ್ಚು ಸಮಯದ ವರೆಗೆ ಬಿಸಿಯಾಗಿರುವುದರ ಜೊತೆಗೆ ರುಚಿಯನ್ನು ಕಾಪಾಡುತ್ತದೆ. ಮಣ್ಣಿನ ಪಾತ್ರೆಯಲ್ಲಿ ಇಡುವುದರಿಂದ ಅಡುಗೆಯು ಹೆಚ್ಚು ಸಮಯದ ವರೆಗೆ ಫ್ರೆಶ್ ಆಗಿ ಇರಿಸುತ್ತದೆ.
• ಮಣ್ಣಿನ ಪಾತ್ರೆಯಲ್ಲಿ ಇಟ್ಟ ವಸ್ತು ಅಥವಾ ಅಡುಗೆಯು ಸದಾ ತಂಪಾಗಿರುತ್ತದೆ –
ಮಣ್ಣಿನ ಮಡಿಕೆಯಲ್ಲಿ ಶೇಕರಿಸಿಟ್ಟ ನೀರು ತಂಪಾಗಿರುತ್ತದೆ. ಹಾಗೆ ಮಣ್ಣಿನ ಮಡಿಕೆಯಲ್ಲಿ ಶೇಕರಿಸಿಟ್ಟ ನೀರನ್ನು ಕುಡಿಯುವುದರಿಂದ ಅಸ್ತಮಾ, ಶೀತದಂತಹ ಸಮಸ್ಯೆಗಳಿಂದ ಪಾರಾಗಬಹುದು. ಈ ನೀರು ತಣ್ಣಗೆ, ಹಾಗು ಇದರಲ್ಲಿ ರುಚಿ ಹೆಚ್ಚಿರುವುದರಿಂದ ನಮಗೆ ಹೆಚ್ಚು ನೀರು ಕುಡಿಯುವಂತೆ ಪ್ರಚೋದಿಸುತ್ತದೆ. ಇದರಿಂದ ದೇಹದಲ್ಲಿನ ನೀರಿನಾಂಶ ಹೆಚ್ಚಾಗುತ್ತದೆ.
• ಜೀರ್ಣಕ್ರಿಯೆಗೆ ಸಹಕರಿಸುತ್ತದೆ –
ಮಣ್ಣಿನ ಪಾತ್ರೆಯಲ್ಲಿ ಮಾಡಿದ ಅಡುಗೆ ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಇದರಲ್ಲಿ ಅಧಿಕ ಪೋಷಕಾಂಶಗಳು ಇರುವುದರಿಂದ ಆಹಾರವು ಬೇಗನೆ ಜೀರ್ಣವಾಗುತ್ತದೆ.
ಅಕ್ಷತಾ