ಕಾರ್ಕಳ: ಕಾರ್ಕಳ ನಗರ ಮತ್ತು ತಾಲೂಕಿನಾದ್ಯಂತ ಬೀಸಿದ ಗಾಳಿ ಮಳೆಗೆ ಕೆಲವೆಡೆ ಮರ ಕಂಬಗಳು ಧರೆಗುರುಳಿದ್ದು ಸ್ವಲ್ಪ ಸಮಯ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಕಾರ್ಕಳದ ದುರ್ಗಾ ಗ್ರಾಮದ ತೆಳ್ಳಾರು ಪಲಾಯಿ ಬಾಕ್ಯಾರು ಎಂಬಲ್ಲಿ ರಸ್ತೆಗೆ ಉರುಳಿದ್ದ ಮರವನ್ನು ತೆರವುಗೊಳಿಸಲಾಯಿತು.
ಇನ್ನು ಗುಡುಗು ಸಹಿತ ಗಾಳಿ ಮಳೆಗೆ ಹೆರ್ಮುಂಡೆ ಹೆಚ್.ಕೆ.ಪೂಜಾರಿ ಅವರ ಮನೆಯ ನೀರಿನ ಪಂಪ್, ಮೀಟರ್, ವೈರಿಂಗ್ ಸಂಪೂರ್ಣ ಸುಟ್ಟು ಹೋಗಿದ್ದು, ಆನಂದ್ ಎಂಬುವವರ ಮನೆಯ ಹಲಸಿನ ಮರಕ್ಕೆ ಸಿಡಿಲು ಬಡಿದು ಭಾಗಶಃ ಸುಟ್ಟು ಹೋಗಿದೆ.
ಕಾರ್ಕಳದಲ್ಲಿ ಭಾರೀ ಗಾಳಿ ಮಳೆಗೆ ಧರೆಗುರುಳಿದ ಮರ ಕಂಬಗಳು
Subscribe
Login
0 Comments