ಹೆಬ್ರಿ: ಕಾರ್ಕಳ ಉತ್ಸವದ ಅಂಗವಾಗಿ ಹೆಬ್ರಿಯ ಚಾರ ನವೋದಯದಿಂದ, ರಾಮಾಂಜನೇಯ ಇಂಡಸ್ಟ್ರಿಸ್ ತನಕ ಕುಚ್ಚೂರು ಗ್ರಾ.ಪಂ., ಚಾರ ನವೋದಯ ವಿದ್ಯಾಲಯ ಹಾಗೂ ಶಾಂತಿನಿಕೇತನ ಯುವವೃಂದ ಕುಡಿಬೈಲ್ ಕುಚ್ಚೂರಿನ ಸಹಯೋಗದೊಂದಿಗೆ ಬೃಹತ್ ಸ್ವಚ್ಛತಾ ಅಭಿಯಾನ ಬುಧವಾರ ನಡೆಯಿತು.
ಈ ಸಂದರ್ಭ ಕುಚ್ಚೂರು ಗ್ರಾ.ಪಂ. ಅಧ್ಯಕ್ಷೆ ರೇವತಿ ಶೆಟ್ಟಿ, ಸದಸ್ಯರಾದ ಮಹೇಶ್ ಶೆಟ್ಟಿ ಬಾದ್ಲು, ಮಹೇಶ್ ಶೆಟ್ಟಿ ಕುಚ್ಚೂರು, ಸತೀಶ್ ಪೂಜಾರಿ, ಸುಜಾತ ಶೆಟ್ಟಿ, ಮಾಲಿನಿ, ಪಿಡಿಒ ಪುರಂದರ್ ಹಾಗೂ ಶಾಂತಿನಿಕೇತನ ಆಡಳಿತ ಮಂಡಳಿ ಸದಸ್ಯರಾದ ರವೀಶ್ ಶೆಟ್ಟಿ, ಜಯಕರ್ ಹಾಗೂ ಚಾರ ನವೋದಯದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.