ಹೆಬ್ರಿ: ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹೆಬ್ರಿಯ ಶ್ರೀರಾಮ ಮಂದಿರಕ್ಕೆ ಮಂಗಳವಾರ ಭೇಟಿ ನೀಡಿದರು.
ರಾಮಮಂದಿರದ ವತಿಯಿಂದ ಸಂಸದ ನಳಿನ್ ಅವರನ್ನು ಗೌರವಿಸಲಾಯಿತು. ಈ ಸಂದರ್ಭ ಅವರು ಬಿಜೆಪಿ ಕಾರ್ಯಕರ್ತರನ್ನು ಭೇಟಿ ಮಾಡಿದರು.
ಈ ಸಂದರ್ಭ ಹೆಬ್ರಿ ಬಿಜೆಪಿ ಅಧ್ಯಕ್ಷ ರಮೇಶ ಕುಮಾರ್ ಶಿವಪುರ, ಬಿಜೆಪಿ ಪ್ರಮುಖರಾದ ಗುರುದಾಸ್ ಶೆಣೈ, ಶಿವಪುರ ಸುರೇಶ ಶೆಟ್ಟಿ, ದಿನೇಶ್ ಪೈ ಮುನಿಯಾಲು, ಜ್ಯೋತಿ ಹರೀಶ ಪೂಜಾರಿ, ನರೇಂದ್ರ ನಾಯಕ್, ಗಣೇಶ್ ಕುಮಾರ್ ಜರ್ವತ್ತು, ಸುಧಾಕರ ಹೆಗ್ಡೆ ಮತ್ತಿತರು ಉಪಸ್ಥಿತರಿದ್ದರು.