ಹೆಬ್ರಿ: ಹೆಬ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಗಾರುಗುಡ್ಡೆ ದೇಕಿಬೆಟ್ಟು ಅಣ್ಣಯ್ಯ ನಾಯ್ಕ ಎಂಬುವರ ಮನೆಗೆ ಬುಧವಾರ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ನಡೆದಿದೆ .
ಹೆಬ್ರಿ ಮೆಸ್ಕಾಂನ ಎಇ ಆದ ಸಂದೀಪ್ ಅವರ ಮನೆ ಇದಾಗಿದ್ದು, ಬೆಂಕಿ ತಗುಲಿರುವುದು ಗೊತ್ತಾದ ಕೂಡಲೇ ಅವರು ಕಾರ್ಕಳದ ಅಗ್ನಿಶಾಮಕದಳ ಹಾಗೂ ಹೆಬ್ರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೇವಲ ಇಪ್ಪತ್ತು ನಿಮಿಷಗಳಲ್ಲಿ ಕಾರ್ಕಳದಿಂದ ಹೆಬ್ರಿಗೆ ಆಗಮಿಸಿದ ಅಗ್ನಿಶಾಮಕ ದಳದವರು, ಹೆಬ್ರಿ ಪೊಲೀಸರ ಸಹಾಯದಿಂದ ಕೂಡಲೇ ಬೆಂಕಿಯನ್ನು ನಂದಿಸಿದ್ದಾರೆ. ಈ ಬೆಂಕಿ ಅವಘಡದಿಂದ ಸುಮಾರು 4ಲಕ್ಷದಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ .
ಹೆಬ್ರಿ ಬಂಗಾರು ಗುಡ್ಡೆಯಲ್ಲಿ ಮನೆಗೆ ಆಕಸ್ಮಿಕ ಬೆಂಕಿ: ಅಪಾರ ನಷ್ಟ
Subscribe
Login
0 Comments