ಕಾರ್ಕಳ:ಕಾರ್ಕಳ ಕಾಂಗ್ರೆಸ್ ವತಿಯಿಂದ ಇಂದು ಕಾರ್ಕಳದಲ್ಲಿ ನಡೆದ ಬೃಹತ್ ಪಾದಯಾತ್ರೆ ಮತ್ತು ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲ್ ಉದಯ ಶೆಟ್ಟಿ ಅವರನ್ನು ಬೆಂಬಲಿಸಲು ಕಾರ್ಕಳದಲ್ಲಿ ಜನ ಸಾಗರವೇ ಸೇರಿತ್ತು.ಬಹಳ ವರ್ಷಗಳ ನಂತರ ಕಾರ್ಕಳದಲ್ಲಿ ಈ ಮಟ್ಟದಲ್ಲಿ ಜನ ಸೇರಿದ್ದು ವಿಶೇಷವಾಗಿತ್ತು.ಕಾರ್ಕಳದ ಗಾಂಧೀ ಮೈದಾನದಿಂದ ಪಾದಯಾತ್ರೆಯಲ್ಲಿ ಮೆರವಣಿಗೆಯ ಅಬ್ಬರ,ಹುಲಿವೇಷ, ಡಿಜೆ,ಬ್ಯಾಂಡ್, ಚೆಂಡೆಗಳ ಅಬ್ಬರ ಜೋರಾಗಿತ್ತು.ಎಲ್ಲೆಲ್ಲೂ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ ಶೆಟ್ಟಿ ಪರ ಘೋಷಣೆಗಳು ಕಂಡು ಬಂತು.ಗ್ರಾಮೀಣ ಭಾಗಗಳಿಂದಲೂ ಅತ್ಯಧಿಕ ಸಂಖ್ಯೆಯಲ್ಲಿ ಕಾಂಗ್ರೆಸ್ ಅಭಿಮಾನಿಗಳು ಆಗಮಿಸಿದ್ದರು.