ಕುಂದಾಪುರ:ನಾನು ಪ್ರಖರ ಹಿಂದುತ್ವವಾದಿ. ನಾನು ಡುಪ್ಲಿಕೇಟ್ ಅಲ್ಲ. ಹಿಂದುತ್ವದಲ್ಲಿ ರಾಜಿಯೇ ಇಲ್ಲ, ನಾನು ಹಿಂದು, ಗೊತ್ತಿಲ್ಲದವರು ತಿಳಿದುಕೊಳ್ಳಲಿ ಎಂದು ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಖಡಕ್ ಆಗಿ ಹೇಳಿದ್ದಾರೆ.
ಗಂಗೊಳ್ಳಿ ದಾಕುಹಿತ್ಲುವಿನಲ್ಲಿ ನಿರ್ಮಾಣಗೊಳ್ಳಲಿರುವ ಮೀನುಗಾರರ ಬಹುಕಾಲದ ಬೇಡಿಕೆಯಾಗಿದ್ದ 8 ಕೋಟಿ 80 ಲಕ್ಷ ರೂ. ವೆಚ್ಚದ ರಿಂಗ್ ರೋಡ್ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ, ಬಳಿಕ ಮಾತನಾಡಿದ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ, ಬೈಂದೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ. ಚುನಾವಣಾ ಪೂರ್ವದಲ್ಲಿ ನೀಡಿದ ಎಲ್ಲಾ ಭರವಸೆ ಈಡೇರಿಸುವ ಕೆಲಸ ಮಾಡಲಾಗಿದೆ ಎಂದರು.
ಕುAದಾಪುರ ಹಾಗೂ ಗಂಗೊಳ್ಳಿ ನಡುವೆ ಸೇತುವೆ ನಿರ್ಮಾಣದ ಮಹತ್ತರ ಯೋಜನೆಯಿದ್ದು ಇದರಿಂದ ಮೀನುಗಾರರಿಗೆ ಅನುಕೂಲವಾಗುವುದಲ್ಲದೆ ನಿತ್ಯ ಪ್ರಯಾಣಿಕರು ಸುತ್ತು ಹಾಕಿ ಕುಂದಾಪುರ ನಗರ ಸೇರುವುದು ತಪ್ಪಿದಂತಾಗುತ್ತದೆ. ಇದರ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳುವುದಾಗಿ ಅವರು ಹೇಳಿದರು.
8 ಕೋಟಿ 80 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಈ ಕಾಮಗಾರಿ ಇದಾಗಿದ್ದು ಮೀನುಗಾರರ ಬಹುಕಾಲದ ಬೇಡಿಕೆಯಾಗಿತ್ತು.
ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಗಂಗೊಳ್ಳಿ ಗ್ರಾಮಪಂಚಾಯತ್ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ನಾನು ಪ್ರಖರ ಹಿಂದುತ್ವವಾದಿ, ಹಿಂದುತ್ವದಲ್ಲಿ ರಾಜಿಯೇ ಇಲ್ಲ-ಬಿ.ಎಂ.ಸುಕುಮಾರ ಶೆಟ್ಟಿ
Subscribe
Login
0 Comments