ದ್ವಿದಳ ಧಾನ್ಯಗಳು ದೇಹಕ್ಕೆ ತುಂಬಾ ಪೋಷಕಾಂಶಗಳನ್ನು ನೀಡುತ್ತವೆ. ಆದರೆ ಈ ಕಾಳುಗಳನ್ನು ಮೊಳಕೆ ಭರಿಸಿ ಸೇವಿಸುವುರಿಂದ ಈ ಕಾಳುಗಳ ಪೋಷಕಾಂಶಗಳು ದುಪ್ಪಟ್ಟಾಗುವುದು. ಈ ಮೊಳಕೆಗಟ್ಟಿದ ಕಾಳುಗಳನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳು ಏನೆಂದು ಈ ಲೇಖನದ ಮೂಲಕ ತಿಳಿದುಕೊಳ್ಳಿ.
- ಮೊಳಕೆಗಟ್ಟಿದ ಕಾಳುಗಳಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ನಿಯಮಿತವಾಗಿ ಈ ಕಾಳುಗಳನ್ನು ಸೇವಿಸುವುದರಿಂದ ಬಿಳಿಕೂದಲು, ತಲೆ ಹೊಟ್ಟು, ಕೂದಲು ಉದುರುವಿಕೆಯಂತಹ ಸಮಸ್ಯೆಯನ್ನು ನಿವಾರಿಸುತ್ತದೆ.
- ವಿಟಮಿನ್ ಎ ಪ್ರಮಾಣ ಕಾಳುಗಳಲ್ಲಿ ಹೆಚ್ಚಾಗಿರುವುದರಿಂದ ಇರುಳು ಕುರುಡುತನವನ್ನು ಕಡಿಮೆ ಮಾಡುತ್ತದೆ. ಕಣ್ಣಿನಲ್ಲಿ ಕಣ್ಣಿನ ಪೊರೆ ರಚನೆಯಾಗುವುದನ್ನು ತಡೆಯುತ್ತದೆ.
- ಕಾಳುಗಳು ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿರಿಸುವ ಮೂಲಕ ಹೃದಯಾಘಾತವಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
- ಮೊಳಕೆಗಟ್ಟಿದ ಕಾಳುಗಳಲ್ಲಿ ಪೋಷಕಾಂಶಗಳು ಹೆಚ್ಚಿರುವುದರಿಂದ ತೂಕವನ್ನು ನಿಯಂತ್ರಣದಲ್ಲಿರಿಸಿಕೊಳ್ಳಬಹುದಾಗಿದೆ.
- ರಕ್ತ ಹೀನತೆಯನ್ನು ತಡೆಯುವಲ್ಲಿ ಉತ್ತಮ ಮನೆ ಮದ್ದಾಗಿ ಕೆಲಸ ಮಾಡುತ್ತದೆ.
- ದೇಹದ ಚಾಯಾಪಚಯ ಕ್ರಿಯೆಗಳನ್ನು ಹೆಚ್ಚಿಸುವಂತಹ ಕಿಣ್ವಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸುತ್ತದೆ.
- ಮಲಬದ್ಧತೆ ಹಾಗೂ ಅತಿಸಾರವನ್ನು ತಡೆಯುತ್ತದೆ. ಕಾಳುಗಳಲ್ಲಿರುವ ಬರ್ ಅಂಶವು ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
- ಗರ್ಭಿಣಿಯರಲ್ಲಿ ಉಂಟಾಗುವ ಪೋಷಕಾಂಶಗಳ ಕೊರತೆಯಿಂದ ಭ್ರೂಣದ ಬೆಳವಣಿಗೆಯಲ್ಲಿ ಕುಂಠಿತವಾಗುತ್ತದೆ. ಮೊಳಕೆಗಟ್ಟಿದ ಕಾಳುಗಳನ್ನು ಗರ್ಭಿಣಿಯರು ಸೇವಿಸುವುದರಿಂದ ಈ ತೊಂದರೆಯನ್ನು ದೂರ ಮಾಡಬಹುದಾಗಿದೆ.
- ವಿಟಮಿನ್ ಬಿ ಯ ಪ್ರಮಾಣ ಕಾಳುಗಳಲ್ಲಿ ಹೆಚ್ಚಾಗಿ ಇರುವುದರಿಂದ ಚರ್ಮ ಸುಕ್ಕುಗಟ್ಟುವುದು, ಒಣಗುವುದು, ಮೊಡವೆಯಂತಹ ತೊಂದರೆಗಳನ್ನು ನಿವಾರಿಸುತ್ತದೆ.