ಉಡುಪಿ: “ಹಿಜಾಬ್ ಹಾಕಿಕೊಂಡು ತರಗತಿಯಲ್ಲಿ ಕುಳಿತುಕೊಳ್ಳುವ ಹಾಗಿಲ್ಲ. ಇದಕ್ಕೆ ಸಿದ್ಧವಿಲ್ಲ ಎಂದಾದರೆ ಕಾಲೇಜಿನ ಆವರಣದ ಒಳಗೆ ಬರಬೇಡಿ” ಎಂದು ಇಂದು ನಡೆದ ಹಿಜಾಬ್ ವಿವಾದದ ಕುರಿತು ನಡೆದ ಪೋಷಕ ಮತ್ತು ಮುಸ್ಲಿಂ ಮುಂಖಡರ ಸಭೆಯಲ್ಲಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಈ ಬಗ್ಗೆ ಈ ಹಂತದಲ್ಲಿ ನಮಗೆ ಯಾವುದೇ ರೀತಿಯ ಅನುಮತಿ ಕೊಡಲು ಸಾಧ್ಯವಿಲ್ಲ. ಸರ್ಕಾರ ಮತ್ತು ಸಮಿತಿ ನಿರ್ಧಾರ ಮಾಡುವ ವರೆಗೆ ಕಾಯಬೇಕು. ಅಲ್ಲಿಯವರೆಗೆ ಹಿಂದಿನ ರೀತಿಯಲ್ಲೇ ಹಿಜಾಬ್ ಹಾಕದೇ ತರಗತಿಯಲ್ಲಿ ಕುಳಿತುಕೊಳ್ಳಬೇಕು. ಇದಕ್ಕೆ ಬದ್ಧವಿಲ್ಲ ಎಂದಾದರೆ ಕಾಲೇಜು ಆವರಣದೊಳಗೆ ಬರಬೇಡಿ ಎಂದು ಖಾರವಾಗಿ ಹೇಳಿದರು.
ಒಂದು ವೇಳೆ ನಾಳೆಯಿಂದ ತರಗತಿಗೆ ಬರುವುದಾದರೆ ಕಾಲೇಜಿನ ನಿಯಮಮಕ್ಕೆ ಬದ್ಧವಾಗಿರಬೇಕು. ಅದರ ಬದಲಾಗಿ ಕಾಲೇಜಿನ ಶೈಕ್ಷಣಿಕ ವಾತಾವರಣವನ್ನು ಹಾಳು ಮಾಡಬಾರದು. ಈ ಬಗ್ಗೆ ಪೊಲೀಸ್ ಇಲಾಖೆಗೆ ಅವರಿಗೆ ಮಾಹಿತಿ ನೀಡಿದ್ದೇವೆ. ಹಿಜಾಬ್ ಗೆ ಸಂಬಂಧಿಸಿದಂತೆ ಯಾವುದೇ ಗೊಂದಲಗಳು ಬೇಡ. ಎಲ್ಲಾ ವಿದ್ಯಾರ್ಥಿಗಳು ಶಿಸ್ತು ಬದ್ಧವಾಗಿ ಕಾಲೇಜಿನ ನಿಯಮಕ್ಕೆ ಅನುಸಾರವಾಗಿ ತರಗತಿಗಳಿಗೆ ಬರಬೇಕು ಎಂದರು.