ಉಡುಪಿ: ಇತಿಹಾಸ ಪ್ರಸಿದ್ಧ ಐಕಳ ಕಾಂತಭಾರೆ-ಬೂದಭಾರೆ ಜೋಡುಕರೆ ಕಂಬಳ ಶನಿವಾರ ಅದ್ಧೂರಿಯಾಗಿ ನಡೆಯಿತು. 46 ನೇ ವರ್ಷದ ಜೋಡುಕರೆ ಕಂಬಳದ ಈ ಬಾರಿ ಕೂಟದಲ್ಲಿ, 4 ಜೊತೆ ಕನೆಹಲಗೆ, 9 ಜೊತೆ ಅಡ್ಡಹಲಗೆ, 17 ಜೊತೆ ಹಗ್ಗ ಹಿರಿಯ, 32 ಜೊತೆ ನೇಗಿಲು ಹಿರಿಯ, 18 ಜೊತೆ ಹಗ್ಗ ಕಿರಿಯ, 99 ಜೊತೆ ನೇಗಿಲು ಕಿರಿಯ ಹೀಗೆ ಒಟ್ಟು 179 ಕೋಣಗಳು ಭಾಗವಹಿಸಿದ್ದವು.
ಸಾವಿರಾರು ಕಂಬಳಾಭಿಮಾನಿಗಳು ಕಂಬಳ ವೈಭವಕ್ಕೆ ಸಾಕ್ಷಿಯಾಗಿದ್ದರು. ಐಕಳ ಕಂಬಳದ ಪ್ರಯುಕ್ತ ಸಹಕಾರಿ ಧುರೀಣ ಎಂ.ಎನ್ ರಾಜೇಂದ್ರ ಕುಮಾರ್, ಪದ್ಮಶ್ರೀ ವಿಜೇತರಾದ ಹರೇಕಳ ಹಾಜಬ್ಬ, ಅಮೈ ಮಹಾಲಿಂಗ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಆಕರ್ಷಕ ವಿದ್ಯುತ್ ದೀಪಾಲಂಕರದ ನಡುವೆ ನಡೆದ ಐಕಳ ಕಂಬಳ ಪ್ರತಿವರ್ಷದಂತೇ ಈ ಬಾರಿಯೂ ಜನರ ಮನಸೂರೆಗೊಳಿಸಿತು.
ಫಲಿತಾಂಶ ಹೀಗಿದೆ:
ಕನೆಹಲಗೆ: ಬೇಲಾಡಿ ಬಾವ ಅಶೋಕ್ ಶೆಟ್ಟಿ
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
( 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ )
ಅಡ್ಡ ಹಲಗೆ: ಪ್ರಥಮ: ಮುಂಡ್ಕೂರು ಮುಲ್ಲಡ್ಕ ರವೀಂದ್ರ ಶೆಟ್ಟಿ “ಬಿ”
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
ದ್ವಿತೀಯ: ಕೋಟ ಗಿಳಿಯಾರ್ ಹಂಡಿಕೆರೆ ವಸಂತ ಕುಮಾರ್ ಶೆಟ್ಟಿ
ಹಲಗೆ ಮುಟ್ಟಿದವರು: ಬೈಂದೂರು ಹೊಸಕೋಟೆ ಮಹೇಶ್
ಹಗ್ಗ ಹಿರಿಯ: ಪ್ರಥಮ: ಪದವು ಕಾನಡ್ಕ ಫ್ಲೇವಿ ಡಿಸೋಜ “ಎ”
ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ
ದ್ವಿತೀಯ: ಮಾರೂರು ಬಿರ್ನೊಟ್ಟು ಅಶ್ವಿತ್ ಶೆಟ್ಟಿ “ಎ”
ಓಡಿಸಿದವರು: ಪಟ್ಟೆ ಗುರುಚರಣ್
ಹಗ್ಗ ಕಿರಿಯ: ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್
ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್
ದ್ವಿತೀಯ: ಕಾಂತಾವರ ಧೃತಿ ತಸ್ವಿಕ್ ಯಶಸ್ ಕುಲಾಲ್
ಓಡಿಸಿದವರು: ಲಾಡಿ ಸುರೇಶ್ ಶೆಟ್ಟಿ
ನೇಗಿಲು ಹಿರಿಯ: ಪ್ರಥಮ: ಇರುವೈಲು ಪಾನಿಲ ಬಾಡ ಪೂಜಾರಿ “ಬಿ”
ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ
ದ್ವಿತೀಯ: ಸುಳ್ಯ ಕಾಂತಮಂಗಲ ಅನುದೀಪ್ ಕುಮಾರ್
ಓಡಿಸಿದವರು: ಕಡಂದಲೆ ಅತಿಥ್ ಶೆಟ್ಟಿ
ನೇಗಿಲು ಕಿರಿಯ: ಪ್ರಥಮ: ಕಲಾಯ ಕೊಂಬೇಲು ಗುತ್ತು ಪ್ರಶಾಂತ ಜಾರಪ್ಪ ಪೂಜಾರಿ
ಓಡಿಸಿದವರು: ಬಾರಾಡಿ ನತೀಶ್
ದ್ವಿತೀಯ: ವೇಣೂರು ಮುಡುಕೋಡಿ ಗಣೇಶ್ ನಾರಾಯಣ ಪಂಡಿತ್
ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್