ಉಕ್ರೇನ್: ರಷ್ಯಾ ಹಾಗೂ ಉಕ್ರೇನ್ನ ಸಮರದಿಂದಾಗಿ ಭಾರತೀಯರು ಹಾಗೂ ಇತರ ದೇಶದ ಪ್ರಜೆಗಳು ರಕ್ಷಣೆಗಾಗಿ ಬಂಕರ್, ಬೇಸ್ಮೆಂಟ್ಗಳಲ್ಲಿ ಆಶ್ರಯ ಪಡೆದಿದ್ದಾರೆ. ಮಂಗಳವಾರ ಖಾರ್ಕೀವ್ನಲ್ಲಿ ನಡೆದ ಬಾಂಬ್ ದಾಳಿಗೆ ಭಾರತದ ವಿದ್ಯಾರ್ಥಿ ನವೀನ್ ಮೃತಪಟ್ಟ ನಂತರ ಅವರಲ್ಲಿ ಆತಂಕ ಇನ್ನಷ್ಟು ಹೆಚ್ಚಾಗಿದೆ.
ಬುಧವಾರ ಭಾರತದ 700 ಮಂದಿ ಸೇರಿ ಸುಮಾರು 1000 ವಿದ್ಯಾರ್ಥಿಗಳು, ಉದ್ಯೋಗಿಗಳು ನಡೆದುಕೊಂಡೇ ಸಮೀಪದ ರೈಲ್ವೆ ನಿಲ್ದಾಣಕ್ಕೆ ಹೊರಟಿದ್ದಾರೆ. ಅವರು ಕೈಯಲ್ಲಿ ಭಾರತದ ಧ್ವಜ ಹಿಡಿದು, ತಮ್ಮ ಬಂಕರ್ನಿಂದ ಏಳು ಕಿ.ಮೀ. ದೂರವಿರುವ ರೈಲ್ವೆ ನಿಲ್ದಾಣಕ್ಕೆ ಕಾಲ್ನಡಿಗೆಯಲ್ಲಿ ಹೊರಟಿದ್ದಾರೆ ಎಂದು ಬಂಕರ್ನಲ್ಲಿ ಆಶ್ರಯ ಪಡೆದಿದ್ದ ಹಾಗೂ ಮೃತ ನವೀನ್ ಅವರ ಸೀನಿಯರ್ ಅಮಿತ್ ಅವರ ತಂದೆ ವೆಂಕಟೇಶ್ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ನವೀನ್ ಸಾವಿನಿಂದ ಆತಂಕಕ್ಕೊಳಗಾಗಿ ಬಂಕರ್ನಲ್ಲಿ ಕುಳಿತರ ಪ್ರಯೋಜನವಿಲ್ಲ ಎಂದು ಗಟ್ಟಿ ಮನಸ್ಸು ಮಾಡಿ ಸಮೀಪದ ರೈಲ್ವೆ ನಿಲ್ದಾಣಕ್ಕೆ ಹೊರಟಿದ್ದಾರೆ. ಬಂಕರ್ ಬೇಸ್ಮೆಂಟ್ಗಳಲ್ಲಿ ಆಶ್ರಯ ಪಡೆದವರೆಲ್ಲರೂ ಮೂರ್ನಾಲ್ಕು ದಿನಗಳಿಂದ ಊಟ-ತಿಂಡಿ ಮಾಡದೇ ಚಾಕಲೇಟ್, ಬಿಸ್ಕಟ್ ತಿಂದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.