Saturday, June 7, 2025

ಹೆಣ್ಣು ಈ ಸಮಾಜದಲ್ಲಿ ಸುರಕ್ಷಿತಳೇ..?

– ಮೈಮುನ ಅಸ್ಲಂ : ನ್ಯೂಸ್‌ ಪ್ಲಸ್‌ ಡೆಸ್ಕ್

ಹೆಣ್ಣು ಸಮಾಜದ ಅವಿಭಾಜ್ಯ ಅಂಗ. ಪ್ರತಿಯೊಬ್ಬ ಪುರುಷನ ಬದುಕಿನಲ್ಲಿ ಹೆಣ್ಣಿಗೆ ಇರುವ ಸ್ಥಾನ ಪ್ರಮುಖವಾಗಿರುತ್ತದೆ. ತಾಯಿಯಾಗಿ, ತಂಗಿಯಾಗಿ, ಪತ್ನಿಯಾಗಿ, ಮಗಳಾಗಿ ಹೀಗೆ ಹೆಣ್ಣು ಪುರುಷನ ಜೀವನದಲ್ಲಿ ಅವಿಭಾಜ್ಯ ಅಂಗವಾಗಿದ್ದಾಳೆ. ಆದರೆ ನಮ್ಮ ಸಮಾಜದಲ್ಲಿ ತಕ್ಕ ಮಟ್ಟದ ಸ್ಥಾನಮಾನ ಸಿಗುತ್ತಿದೆಯೋ, ಆಕೆ ಸುರಕ್ಷಿತಳಾಗಿದ್ದಾಳೆಯೋ ಅನ್ನೋದು ಆಲೋಚಿಸಬೇಕಾದ ಸಂಗತಿ.

ವಿಶ್ವದಾದ್ಯಂತ ಮಾರ್ಚ್ 8ರಂದು ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ. ಮಹಿಳೆಯನ್ನು ಗೌರವಿಸುವ ಹಿನ್ನಲೆಯಲ್ಲಿ ಈ ವಿಶೇಷ ದಿನವನ್ನು ನಿಗದಿಪಡಿಸಲಾಗಿದೆ. ಈ ದಿನದಂದು ಮಹಿಳೆಯರ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಹೆಣ್ಣು ಮಕ್ಕಳ ಹಕ್ಕುಗಳು, ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಒತ್ತು ನೀಡುವುದು, ಹಾಗೆಯೇ ಮಹಿಳೆಯರಿಗೆ ಸಮಾಜದಲ್ಲಿ ಉಂಟಾಗುವ ಸಮಸ್ಯೆಗಳನ್ನು ಎತ್ತಿ ತೋರಿಸುವ ಉದ್ದೇಶವನ್ನು ಇದು ಹೊಂದಿದೆ.

ಆದರೆ ಆಕೆ ಎದುರಿಸುತ್ತಿರುವ ಸಮಸ್ಯೆಗಳು ತಕ್ಕಮಟ್ಟಿಗೆ ಪರಿಹಾರವಾಗುತ್ತಿದೆಯೋ ಎನ್ನುವುದು ಆಲೋಚಿಸಬೇಕಾದ ಸಂಗತಿ. ಸಮಾಜದಲ್ಲಿ ಹೆಣ್ಣು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ. ಅದರಲ್ಲಿ ಮುಖ್ಯವಾಗಿ ಸಮಾಜದಲ್ಲಿ ಆಕೆಯ ಸುರಕ್ಷತೆ. ಒಂದು ಹೆಣ್ಣು ಹುಟ್ಟುವಾಗಲೇ ಆಕೆಯ ಪೋಷಕರಲ್ಲಿ ಭಯ ಶುರುವಾಗುತ್ತದೆ. ತನ್ನ ಮಗಳು ಈ ಸಮಾಜದಲ್ಲಿ ಸುರಕ್ಷಿತಳಾಗಿರುತ್ತಾಳೆಯೇ ಎಂದು.

ಯಾಕೆಂದರೆ ಸಣ್ಣ ಮಕ್ಕಳನ್ನು ಬಿಡದ ಕಾಲವಿದು. ಕಾಮ ಪಿಶಾಚಿಗಳು ತಮ್ಮ ಕಾಮದಾಟಕ್ಕೆ ಪುಟ್ಟ ಹೆಣ್ಣು ಮಕ್ಕಳನ್ನು ಹರಿದು ಬಿಸಾಡುತ್ತಾರೆ. ಅಂಕಿಅಂಶದ ಪ್ರಕಾರ ಭಾರತದಲ್ಲಿ ಪ್ರತಿ ದಿನಕ್ಕೆ ಅಂದಾಜು 77 ಅತ್ಯಾಚಾರ ಪ್ರಕರಣಗಳು ನಡೆಯುತ್ತಿದೆ. ಎಷ್ಟೋ ಹೆಣ್ಣು ಮಕ್ಕಳನ್ನು ಅತ್ಯಾಚಾರವೆಸಗಿ ಕೊಂದು ಹಾಕುತ್ತಿದ್ದಾರೆ. ಕೆಲವು ಪ್ರಕರಣಗಳು ದಾಖಲಾಗಿದ್ದರೆ, ಇನ್ನು ಕೆಲವರು ತಮ್ಮ ಮಾನಾಭಿಮಾನದ ಭಯದಿಂದ ಅಥವಾ ಇನ್ಯಾವುದೋ ಬೆದರಿಕೆಯ ಭಯದಿಂದ ಮುಚ್ಚಿ ಹಾಕುತ್ತಿದ್ದಾರೆ. ನಿರ್ಭಯಾ, ಪ್ರಿಯಾಂಕಾರಂತಹ ಹೆಣ್ಣು ಮಕ್ಕಳು ಕಾಮ ಪಿಶಾಚಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ.

ಮೊತ್ತಮೊದಲು ಭಾರತದಲ್ಲಿ ಇರುವ ಭೀಕರ ಸಮಸ್ಯೆ ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲದಿರುವುದು. ಈ ಸಮಸ್ಯೆಗೆ ಪರಿಹಾರ ಸಿಗಬೇಕಾಗಿದೆ. ಮಧ್ಯ ರಾತ್ರಿಯಲ್ಲಿಯೂ ಹೆಣ್ಣು ಯಾವುದೇ ರೀತಿಯ ಭಯವಿಲ್ಲದೆ ಓಡಾಡುವ ಸನ್ನಿವೇಶವನ್ನು ಒದಗಿಸಿಕೊಡಬೇಕಾಗಿದೆ. ತಂದೆ ತಾಯಂದಿರು ತಮ್ಮ ಹೆಣ್ಣು ಮಕ್ಕಳನ್ನು ಹೊರಗಡೆ ಬಿಟ್ಟರೂ ಭಯವಿಲ್ಲದೆ ಮನೆಯಲ್ಲಿ ಇರುವ ಸಂದರ್ಭ ಒದಗಿಸಬೇಕು.

ಸಣ್ಣ ಪುಟ್ಟ ಹೆಣ್ಣು ಮಕ್ಕಳು ಯಾವುದೇ ಭಯವಿಲ್ಲದೆ ಓಡಾಡಬೇಕು. ಅದಕ್ಕಾಗಿ ಸರ್ಕಾರ ಕಠಿಣ ನಿಯಮವನ್ನು ಹಾಗೂ ಹೆಣ್ಣಿನ ಸುರಕ್ಷತೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಬೇಕಾಗಿದೆ. ಒಂದೂ ಅತ್ಯಾಚಾರ, ಹೆಣ್ಣಿನ ಸಾವು ಪ್ರಕರಣಗಳು ದಾಖಲಾಗದ ದಿನ ಬರಲಿ. ಆ ದಿನ ಹೆಣ್ಣು ಈ ಸಮಾಜದಲ್ಲಿ ಸುರಕ್ಷಿತಳು ಎಂದು ನಾವು ತಿಳಿಯಬಹುದು.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles