ಮಂಗಳೂರು: ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಅವರನ್ನು ಆಹ್ವಾನಿಸಿದ್ದಕ್ಕಾಗಿ ದೇವಸ್ಥಾನದ ಆಡಳಿತ ಮಂಡಳಿ ವಿರುದ್ದ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಖಾದರ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ದೇವಸ್ಥಾನದ ಧರ್ಮಸಭೆಗೆ ಮುಸ್ಲಿಂರನ್ನು ಕರೆಸಿದ್ದಾರೆ. ಇದೊಂದು ಎಂಥ ನಾಚಿಕೆಯ ವಿಷಯ? ಹಿಂದೂಗಳಿಗೆ ಇದು ನಾಚಿಕೆ ಆಗಬೇಕು. ಅವರೇನು ನಮಗೆ ಬೋಧನೆ ಮಾಡೋದು? ಅವರು ನಮಗೆ ಬೋಧನೆ ಮಾಡೋಕೆ ಆಗುತ್ತಾ? ಇದು ಧರ್ಮಸಭೆ ಆಗುತ್ತಾ? ಅಧರ್ಮ ಸಭೆ ಆಗುತ್ತದೆ. ರಾತ್ರಿ ಕದ್ದ ದನದ ಮಾಂಸ ತಿನ್ನೋರನ್ನ ಕರೆಸಿದ್ರಲ್ಲ ಇದೆಂತ ಅವಸ್ಥೆ. ರಾಜಕೀಯಕ್ಕೆ ಇಲ್ಲಿ ಕರೀಬೇಡಿ. ಇದು ರಾಜಕೀಯ ವೇದಿಕೆ ಅಲ್ಲ. ಇದು ಧರ್ಮ ಸಭೆ. ಹಿಂದೂಗಳ ಕಾರ್ಯ. ಎಂಎಲ್ಎ ಆದರೂ ಇಲ್ಲಿಗೆ ಕರೆಯಬೇಡಿ. ರಮಾನಾಥ್ ರೈ ಕರೀರಿ ನನಗೆ ಸಂತೋಷ. ಓಟಿಗೋಸ್ಕರ ಮತ್ತು ಸೀಟಿಗೋಸ್ಕರ ಹಿಂದೂ ಸಮಾಜದ ಮೇಲೆ ಸವಾರಿ ಮಾಡಲು ಬಿಡ್ತಿರಾ? ದೇವಸ್ಥಾನ ಕಟ್ಟೋದೇ ಹಿಂದೂಗಳು, ಅವರೆಲ್ಲಾ ಇಲ್ಲಿ ಒಂದಾಗಬೇಕು ಹೊರತು ಮುಸ್ಲಿಂ ಸಮುದಾಯವನ್ನು ಕರೆಯುವುದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.